Advertisement

ಶಬರಿಮಲೆ ದೇಗುಲಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರ ಪ್ರವೇಶಕ್ಕೆ ಅನುಮತಿ: ಮುಜರಾಯಿ ಸಚಿವರ ಹೇಳಿಕೆ

07:38 PM Dec 02, 2020 | sudhir |

ಶಬರಿಮಲೆ: ಅಯ್ಯಪ್ಪ ದೇಗುಲದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲು ನಿರ್ಧರಿಸಲಾಗಿದೆ. ಕೊರೊನಾ ನಿಯಮಗಳ ಅನ್ವಯವೇ ಈ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇರಳ ಮುಜರಾಯಿ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ತಿಳಿಸಿದ್ದಾರೆ.

Advertisement

ಹೊಸ ನಿಯಮಗಳ ಪ್ರಕಾರ ವಾರದ ದಿನಗಳಲ್ಲಿ ಗರಿಷ್ಠ 2 ಸಾವಿರ ಮಂದಿ, ಶನಿವಾರ ಮತ್ತು ರವಿವಾರ 3 ಸಾವಿರ ಮಂದಿ ಭೇಟಿ ನೀಡಬಹುದು. ಸದ್ಯದ ಮಿತಿ ಕ್ರಮವಾಗಿ ಪ್ರತೀ ದಿನ 1 ಸಾವಿರ ಮತ್ತು ವಾರಾಂತ್ಯದಲ್ಲಿ 2 ಸಾವಿರ ಇದೆ.
ನ. 16ರಂದು ದೇಗುಲದ ಬಾಗಿಲು ತೆರೆಯಲಾಗಿತ್ತು. ಡಿ. 26ರಂದು ಮಂಡಲಪೂಜೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next