Advertisement

ಹಿಂದೂ ಮಹಾಸಾಗರದಲ್ಲಿ ಸಿಲುಕಿದ್ದ ಯೋಧನ ರಕ್ಷಣೆ

09:50 AM Sep 25, 2018 | Team Udayavani |

ಹೊಸದಿಲ್ಲಿ: ನೌಕೆಯ ಮೂಲಕ ವಿಶ್ವಪರ್ಯಟನೆ ಮಾಡುವ ಗೋಲ್ಡನ್‌ ಗ್ಲೋಬ್‌ ಸ್ಪರ್ಧೆಯಲ್ಲಿ ಭಾಗವಹಿಸಿ, ಹಿಂದೂ ಮಹಾಸಾಗರದಲ್ಲಿ ಚಂಡಮಾರುತಕ್ಕೆ ಸಿಲುಕಿದ್ದ ಭಾರತೀಯ ನೌಕಾಪಡೆಯ ಯೋಧ ಅಭಿಲಾಷ್‌ ಟಾಮಿಯನ್ನು 3 ದಿನಗಳ ಬಳಿಕ ಸೋಮವಾರ ರಕ್ಷಣೆ ಮಾಡಲಾಗಿದೆ. ಚಂಡಮಾರುತದ ಹೊಡೆತದಿಂದ ಅಭಿಲಾಷ್‌ ಬೆನ್ನಿಗೆ ಗಾಯವಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement

ಆಸ್ಟ್ರೇಲಿಯಾದ ಪರ್ತ್‌ನಿಂದ 1900 ನಾಟಿಕಲ್‌ ಮೈಲು ದೂರದಲ್ಲಿ ಶುಕ್ರವಾರ ಇವರು ಸಿಲುಕಿದ್ದರು. ದೇಶೀಯವಾಗಿ ನಿರ್ಮಿಸಲಾದ ಥೊರಿಯಾ ನೌಕೆ ಕೂಡ ಹಾನಿಗೊಳಗಾಗಿದೆ. ಫ್ರಾನ್ಸ್‌ನ ಒಸಿರಿಸ್‌ ಮೀನುಗಾರಿಕೆ ಹಡಗು ಬಳಸಿ ಅಭಿಲಾಷ್‌ ರಕ್ಷಣೆ ಮಾಡಲಾಗಿದೆ. ಕೀರ್ತಿ ಚಕ್ರ ಪುರಸ್ಕಾರವನ್ನೂ ಪಡೆದಿರುವ ಇವರು, ಎರಡನೇ ಬಾರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು. ಚಂಡಮಾರುತದ ಹೊಡೆತಕ್ಕೆ ಸಿಲುಕುವಾಗ ಇವರು ಸ್ಪರ್ಧೆಯಲ್ಲಿ ಮೂರನೇ ಸ್ಥಾನದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next