Advertisement

ಪ್ರೇಯಸಿಯನ್ನು ಕೊಲೆ ಮಾಡಿ, ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ!

11:26 AM Aug 27, 2021 | Team Udayavani |

ಶಿವಮೊಗ್ಗ: ಏಳು ವರ್ಷದ ಪ್ರೀತಿಯೊಂದು ಕೊಲೆ ಹಾಗೂ ಆತಹತ್ಯೆಯಲ್ಲಿ ಅಂತ್ಯವಾಗಿದೆ. ಕಳೆದ ಏಳು ವರ್ಷಗಳಿಂದ ತಾನು ಪ್ರೀತಿ ಮಾಡಿದ್ದ ಹುಡುಗಿಯನ್ನು ಕೊಲೆ ಮಾಡಿದ ಪಾಗಲ್ ಪ್ರೇಮಿಯೊಬ್ಬ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ನಡೆದಿರುವುದು ಶಿವಮೊಗ್ಗ ಜಿಲ್ಲೆಯ ನೇರಲಗಿ ಕಾಡಿನಲ್ಲಿ.

Advertisement

ಮೃತಪಟ್ಟವರನ್ನು ಸಾಗರ ತಾಲೂಕು ಕಾನೂರು ಗ್ರಾಮದ ಕವಿತಾ ಮತ್ತು ಬೆಳ್ಳೂರು ಸಮೀಪದ ಕಗ್ಗಲಿಜಡ್ಡು ಗ್ರಾಮದ ದ್ವಿತೀಯ ಪದವಿ ವಿದ್ಯಾರ್ಥಿ ಶಿವಮೂರ್ತಿ ಎಂದು ಗುರುತಿಸಲಾಗಿದೆ. ಹೊಸನಗರ ತಾಲೂಕು ರಿಪ್ಪನ್ ಪೇಟೆ ಠಾಣೆ ವ್ಯಾಪ್ತಿಯ ಬೆಳ್ಳೂರು ಸಮೀಪದ ನೇರಲಗಿ ಕಾಡಿನಲ್ಲಿ ಈ ಘಟನೆ ನಡೆದಿದೆ.

ಗುರುವಾರ ನೇರಲಗಿ ಕಾಡಿನಲ್ಲಿ ಪ್ರೇಯಸಿ ಕವಿತಾಳ ಕತ್ತನ್ನು ವೇಲಿನಲ್ಲಿ ಬಿಗಿದು ಶಿವಮೂರ್ತಿ ಕೊಲೆ ಮಾಡಿದ್ದ. ಬಳಿಕ ಆತನೂ ಅಲ್ಲಿಯೇ ವಿಷ ಸೇವಿಸಿದ್ದ.

ಘಟನೆ ಹಿನ್ನೆಲೆ: ಶಿವಮೂರ್ತಿ ಮತ್ತು ಕವಿತಾ ಕಳೆದ ಏಳು ವರ್ಷದಿಂದ ಪ್ರೀತಿಸುತ್ತಿದ್ದರು ಎನ್ನಲಾಗುತ್ತಿದೆ. ಹೈಸ್ಕೂಲ್ ನಿಂದಲೇ ಇವರಿಬ್ಬರೂ ಪರಸ್ಪರ ಪ್ರೀತಿಸಲಾರಂಭಿಸಿದ್ದರು. ಬಳಿಕ ಶಿವಮೂರ್ತಿ ಬಳಿಕ ರಿಪ್ಪನ್ ಪೇಟೆಯಲ್ಲಿ ಪದವಿ ವ್ಯಾಸಂಗಕ್ಕೆ‌ ಸೇರಿದ್ದ. ಕವಿತಾ ಶಿವಮೊಗ್ಗದಲ್ಲಿ‌ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು. ಈ ವೇಳೆ‌ ಆಂಬುಲೆನ್ಸ್ ಡ್ರೈವರ್ ಓರ್ವನನ್ನು ಕವಿತಾ ಪ್ರೀತಿಸಲಾರಂಭಿಸಿದ್ದಳು ಎನ್ನಲಾಗಿದೆ.

ಇದನ್ನೂ ಓದಿ:ಮೈಸೂರು ದರೋಡೆ ಶೂಟೌಟ್ ಪ್ರಕರಣ ಭೇದಿಸಿದ ಪೊಲೀಸರು: ಪುಣೆಯಲ್ಲಿ ಇಬ್ಬರು ಆರೋಪಿಗಳ ಬಂಧನ

Advertisement

ಇದರಿಂದ ರೊಚ್ಚಿಗೆದ್ದ ಶಿವಮೂರ್ತಿ ಶಿವಮೊಗ್ಗದಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಕವಿತಾಳನ್ನು ತನ್ನೂರಿಗೆ ಕರೆದುಕೊಂಡು ಬಂದಿದ್ದ. ಬಳಿಕ ಮಾತನಾಡಬೇಕು ಎಂದು ಹೇಳಿ‌ ಕವಿತಾಳನ್ನು ನೇರಲಿಗೆ ಕಾಡಿಗೆ ಕರೆದೊಯ್ದಿದ್ದ. ಈ ವೇಳೆ‌ ಕಾಡಿನ ಹೊಸಕೆರೆ ಬಳಿ ಕವಿತಾಳ ಕತ್ತನ್ನು ಆಕೆಯ ವೇಲಿನಿಂದಲೇ ಬಿಗಿದು ಕೊಲೆ ಮಾಡಿದ್ದ ಶಿವಮೂರ್ತಿ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ‌.

ಕೂಡಲೇ ಶಿವಮೂರ್ತಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ತಡರಾತ್ರಿ ಮೃತಪಟ್ಟಿದ್ದಾನೆ. ನೇರಲಗಿ‌ ಕಾಡಿನಲ್ಲಿ ಡೆತ್ ನೋಟ್ ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next