Advertisement

ಹಳ್ಳಿಗರಲ್ಲಿ ಮೂಢನಂಬಿಕೆ ಪ್ರೋತ್ಸಾಹಿಸುತ್ತಿದ್ದ 7 ಮಂದಿ ಸೆರೆ

04:41 PM Jul 14, 2018 | Team Udayavani |

ಮೇದಿನೀನಗರ, ಜಾರ್ಖಂಡ್‌ : ಪಲಮಾವೂ ಜಿಲ್ಲೆಯ ಜಮೂನೆ ಗ್ರಾಮದ ಜನರಲ್ಲಿ ಮೂಢನಂಬಿಕೆಯನ್ನು ಪ್ರೋತ್ಸಾಹಿಸುತ್ತಿದ್ದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಮಾನಸಿಕ ಅಸ್ವಸ್ಥನೆಂದು ಈ ಆರೋಪಿಗಳಿಂದಲೇ ಘೋಷಿಸಲ್ಪಟ್ಟಿದ್ದ ಮನ್‌ರೂಪ್‌ ಭೂಯಿಯಾನ್‌ ಕೊಟ್ಟ ದೂರಿನ ಪ್ರಕಾರ ಪೊಲೀಸರು ಮೂಢನಂಬಿಕೆಯನ್ನು ಜನರಲ್ಲಿ ಪ್ರೋತಾಹಿಸುವುದರಲ್ಲಿ ನಿರತರಾಗಿದ್ದ ಈ ಏಳು ಮಂದಿಯನ್ನು ಬಂಧಿಸಿದರು ಎಂದು ಎಸ್‌ಪಿ ಇಂದ್ರಜಿತ್‌ ಮಹಾತಿಯಾ ತಿಳಿಸಿದ್ದಾರೆ. 

ಮನ್‌ರೂಪ್‌ ಮಾನಸಿಕ ಅಸ್ವಸ್ಥನೆಂದು ಹೇಳಿದ್ದ ಆರೋಪಿಗಳು ಆತನನ್ನು  ಓಝಾ ಎಂಬ ನಕಲಿ ವೈದ್ಯನೊಂದಿಗೆ ಗಢವಾಹ್‌ಗೆ ಚಿಕಿತ್ಸೆಗೆಂದು ಒಯ್ದಿದ್ದರು; ಆದರೆ ಮನ್‌ರೂಪ್‌ ಅವರ ಕೈಯಿಂದ ತಪ್ಪಿಸಿಕೊಂಡು ಬಂದು ಮೇದಿನೀನಗರದಲ್ಲಿ ಪೊಲೀಸರಿಗೆ ದೂರು ಕೊಟ್ಟಿದ್ದ ಎಂದು ಎಸ್‌ಪಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next