Advertisement

ಸೇವಾಲಾಲ್‌ ಮನುಕುಲದ ಉದ್ಧಾರಕ

12:21 PM Mar 08, 2018 | |

ಶಹಾಬಾದ: ಮಹಾತಪಸ್ವಿ ಸಂತ ಸೇವಾಲಾಲ ಮಹಾರಾಜರ ಆಚಾರ ವಿಚಾರಗಳು ಕೇವಲ ಬಂಜಾರ ಸಮುದಾಯಕ್ಕೆ ಸೀಮಿತವಾಗಿರದೆ ಮನುಕುಲದ ಉದ್ಧಾರದ ಸದಾಶಯ ಒಳಗೊಂಡಿದೆ ಎಂದು ನಗರಸಭೆ ಸದಸ್ಯ ಕುಮಾರ ಚವ್ಹಾಣ ಹೇಳಿದರು.

Advertisement

ನಗರದಲ್ಲಿ ನಗರದ ಆಟೋ ಸಂಘದಿಂದ ಹಮ್ಮಿಕೊಂಡ ಸಂತ ಮಹಾತಪಸ್ವಿ ಸೇವಾಲಾಲ್‌ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶಾಲ ಮನೋಭಾವದಿಂದ ಕೂಡಿದ ಸೇವಾಲಾಲ ಮಹಾರಾಜರ ಸಂದೇಶ ಇಂದಿಗೂ ಪ್ರಸ್ತುತ ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಾ| ಎಂ.ಎ. ರಶೀದ್‌ ಮಾತನಾಡಿ, ಬಂಜಾರ ಸಮಾಜದವರು ಕಾಯಕ ಯೋಗಿಯಾಗಿದ್ದಾರೆ. ಪ್ರತಿಯೊಬ್ಬರು ಶ್ರಮ ಸಂಸ್ಕೃತಿ ಹೊಂದಿದವರಾಗಿದ್ದಾರೆ. ಜಾತ್ಯತೀತ ಭಾರತದಲ್ಲಿ ನಾನಾ ಧರ್ಮಿಯರು ತಮ್ಮ ಧರ್ಮಕ್ಕೆ ಅನುಗುಣವಾದ ಆಚಾರ, ವಿಚಾರಗಳನ್ನು ಪಾಲಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.  ಅವರ ಆಚರಣೆಗಳು ಬೇರೆ, ಬೇರೆಯಾದರೂ ಆದರ್ಶ ಒಂದೇ ಆಗಿದೆ ಎಂದು ಹೇಳಿದರು. ನಗರಸಭೆ ಅಧ್ಯಕ್ಷೆ ಗೀತಾ ಸಾಹೇಬಗೌಡ ಬೊಗುಂಡಿ ಕಾರ್ಯಕ್ರಮ ಉದ್ಘಾಟಿಸಿದರು.
 
ಸತ್ಸಂಗ ಸಮಿತಿ ಅಧ್ಯಕ್ಷ ಕಿಶನ ನಾಯಕ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಡಾ| ಅಹ್ಮದ್‌ ಪಟೇಲ್‌, ನಗರಸಭೆ ಮಾಜಿ
ಅಧ್ಯಕ್ಷ ಗಿರೀಶ ಕಂಬಾನೂರ, ನಗರಸಭೆ ಸದಸ್ಯ ಶರಣು ಪಗಲಾಪುರ, ಬಸವರಾಜ ಬಿರಾದರ, ದೇವರಾಜ ರಾಠೊಡ,
ಕಿರಣ ಚವ್ಹಾಣ, ಧರ್ಮು ಚವ್ಹಾಣ, ವಿಠ್ಠಲ ಚವ್ಹಾಣ, ವಿಜಯ ಚವ್ಹಾಣ, ರವಿ ರಾಠೊಡ, ಹಣಮಂತ ಪವಾರ, ಸುನೀಲ
ಚವ್ಹಾಣ, ಭರತ ರಾಠೊಡ, ಮಹೇಶ ಚವ್ಹಾಣ, ಸಾಬಣ್ಣ , ಸಾಹೇಬಗೌಡ ಬೊಗುಂಡಿ ಹಾಗೂ ಯುವಕರು, ಸಮಾಜದ ಗಣ್ಯರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next