Advertisement

ಸದನ ಮುಂದೂಡಿಕೆಗೆ ರೇವಣ್ಣ, ನಿಂಬೆ ಹಣ್ಣು ಕಾರಣವಂತೆ! ಮಾಧುಸ್ವಾಮಿ ಆರೋಪವೇನು?

09:17 AM Jul 24, 2019 | Team Udayavani |

ಬೆಂಗಳೂರು: ಜೆಡಿಎಸ್ ಪಕ್ಷದ ಎಚ್.ಡಿ.ರೇವಣ್ಣನಿಂದಾಗಿ ನಾವು ವಿಧಾನಸಭೆ ಕಲಾಪದಲ್ಲಿ ಸೊರಗುವಂತಾಗಿದೆ ಎಂದು ಬಿಜೆಪಿ ಹಿರಿಯ ಸದಸ್ಯ ಜೆ.ಮಾಧುಸ್ವಾಮಿ ಟಾಂಗ್ ನೀಡಿದ್ದಾರೆ.

Advertisement

ಮಂಗಳವಾರ ಕಲಾಪ ಆರಂಭಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾರದ್ದೋ ಶಾಸ್ತ್ರ ಕೇಳಿಕೊಂಡು ಬಂದು ಸದನ ಮುಂದೂಡುತ್ತಿದ್ದಾರೆ ಎಂದು ಆರೋಪಿಸಿದರು.

ರೇವಣ್ಣನ ನಿಂಬೆ ಹಣ್ಣಿನ ಕಾಟದಿಂದ, ನಾವೆಲ್ಲ ಹಳ್ಳಿಯಿಂದ ಬಂದು ಇಲ್ಲಿ ಸೊರಗುವಂತಾಗಿದೆ ಎಂದು ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ರಾಜೀನಾಮೆ ನೀಡಿರುವ ಶಾಸಕರನ್ನು ಬೆದರಿಸುವ ಕೆಲಸ ನಡೆಯುತ್ತಿದೆ. ವಿಶ್ವಾಸಮತ ಯಾಚಿಸದೇ ಅನಾವಶ್ಯಕವಾಗಿ ಕಾಲಹರಣ ಮಾಡುವ ಮೂಲಕ ಕಾಂಗ್ರೆಸ್, ಜೆಡಿಎಸ್ ದ್ರೋಹ ಎಸಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next