Advertisement

ಸೇವಾ ಶುಲ್ಕ: ಸರ್ಕಾರದ ಆದೇಶ ವಿರುದ್ಧ ಹೋರಾಟ?  

03:45 AM Apr 23, 2017 | Team Udayavani |

ನವದೆಹಲಿ: ರೆಸ್ಟಾರೆಂಟ್‌ಗಳು, ಹೋಟೆಲ್‌ಗ‌ಳ ಬಿಲ್‌ನಲ್ಲಿರುವ ಸರ್ವಿಸ್‌ ಚಾರ್ಜ್‌ ಅನ್ನು ಪಾವತಿ ಮಾಡುವುದು ಗ್ರಾಹಕರಿಗೆ ಬಿಡಬೇಕು, ಅದನ್ನು ಖಾಲಿ ಬಿಡಬೇಕು ಎಂಬ ಕೇಂದ್ರ ಸರ್ಕಾರದ ನಿರ್ದೇಶನಕ್ಕೆ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸೂಚನೆ ಜಾರಿಗೊಳಿಸುತ್ತಾರೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಅಲ್ಲದೆ ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುವುದಾಗಿ ತಿಳಿಸಿದ್ದಾರೆ.

Advertisement

“ಇದು ಕೇವಲ ಒಂದು ಮಾರ್ಗಸೂಚಿ ಅಥವಾ ಸ‌ಲಹೆಯಷ್ಟೇ. ಈ ಕುರಿತು ನಾವು ಸಚಿವಾಲಯದ ಮುಂದೆ ಕಾನೂನಾತ್ಮಕವಾಗಿ ದೂರು ನೀಡಲಿದ್ದೇವೆ,’ ಎಂದು ಹೋಟೆಲ್‌ಗ‌ಳು ಮತ್ತು ರೆಸ್ಟೋರೆಂಟ್‌ಗಳ ಸಂಘದ ಮಾಧ್ಯಮ ಸಲಹೆಗಾರ ಪ್ರದೀಪ್‌ ಶೆಟ್ಟಿ ಹೇಳಿದ್ದಾರೆ.

ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಕೆಲ ಹೋಟೆಲ್‌ಗ‌ಳಲ್ಲಿ ಗ್ರಾಹಕರ ಶೋಷಣೆ ನಡೆಯುತ್ತಿದ್ದು, ಸರ್ವಿಸ್‌ ಚಾರ್ಜ್‌ ನೀಡಲು ಸಿದ್ಧರಿಲ್ಲದ ಗ್ರಾಹಕರನ್ನು ಹೋಟೆಲ್‌ ಒಳಗೆ ಬಿಡುತ್ತಿಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next