Advertisement

ಸರ್ವರ್ ಸಮಸ್ಯೆ ನೆಪ, ಬಯೋಮೆಟ್ರಿಕ್ ಮೂಲಕ ಪಡಿತರ ವಿತರಣೆ: ಸಾರ್ವಜನಿಕರಿಂದ ವಿರೋಧ

11:45 AM Jun 17, 2020 | sudhir |

ಗಂಗಾವತಿ: ಕೊವಿಡ್ 19 ರೋಗ ಹರಡದಂತೆ ಆಹಾರ ಇಲಾಖೆ ಮೊಬೈಲ್ ಒಟಿಪಿ ಮೂಲಕ ಕಳೆದ ಮೂರು ತಿಂಗಳಿಂದ ಆಹಾರ ಪಡಿತರ ವಿತರಣೆ ಮಾಡಿದ್ದ ಆಹಾರ ಇಲಾಖೆ ಜೂನ್ ತಿಂಗಳ ಪಡಿತರವನ್ನು ಬಯೋಮೆಟ್ರಿಕ್ ಮೂಲಕ ನೀಡುತ್ತಿದ್ದು ಪಡಿತರದಾರರು ತಮ್ಮ ಬೆರಳಿನ ಗುರುತು ಡೊಂಗಲ್ ಮೇಲೆ ಒತ್ತುವ ಮೂಲಕ ಪಡಿತರ ಪಡೆಯುತ್ತಿದ್ದಾರೆ. ಇದರಿಂದ ಕೋವಿಡ್ ರೋಗದ ಮುನ್ನೆಚ್ಚರಿಕೆ ಕಾಪಾಡಲು ಆಗುತ್ತಿಲ್ಲ. ಕೂಡಲೇ ಮೊದಲಿನಂತೆ ಒಟಿಪಿ ಪಡೆದು ರೇಶನ್ ವಿತರಣೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

Advertisement

ಜಿಲ್ಲಾ ಆಹಾರ ನಾಗರೀಕ ಪೂರೈಕೆ ಉಪನಿರ್ದೇಶಕರ ಆದೇಶದಂತೆ ಬಯೋಮೆಟ್ರಿಕ್ ಪದ್ದತಿಯ ಮೂಲಕ ಆಹಾರಧಾನ್ಯ ವಿತರಣೆ ಮಾಡುವಂತೆ ಆಹಾರ ನಿರೀಕ್ಷಕರು ಮೊಬೈಲ್ ಮೂಲಕ‌ ಸಂದೇಶ ರವಾನೆ ಮಾಡಿದ್ದರಿಂದ ಬಯೋಮೆಟ್ರಿಕ್ ನಂತೆ ವಿತರಣೆ ಮಾಡಲಾಗುತ್ತಿದ್ದು ಇದಕ್ಕೆ ಸಾರ್ವಜನಿಕರು ಕೋವಿಡ್ ಭಯದಿಂದ ವಿರೋಧಿಸಿತ್ತಿದ್ದು ಮೊದಲಿನಂತೆ ಒಟಿಪಿಯಲ್ಲಿ ಪಡಿತರ ವಿತರಣೆ ಮಾಡುವಂತೆ ಒತ್ತಾಯ ಕೇಳಿ ಬರುತ್ತಿದೆ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರು ತಿಳಿಸಿದ್ದಾರೆ

ಒಟಿಪಿ ಮೂಲಕ ಪಡಿತರ ವಿತರಣೆ ಕ್ರಮ: ಸರ್ವರ್ ತಾಂತ್ರಿಕ ತೊಂದರೆಯಿಂದ ಒಟಿಪಿ ಪದ್ದತಿ ಆಹಾರ ಧಾನ್ಯ ವಿತರಣೆ ಮಾಡಲು ತೊಂದರೆ ಆಗುತ್ತಿದೆ ಎನ್ನುವ ಮಾಹಿತಿ ಇದೆ ಕೆಲವೆಡೆ ಬಯೋಮೆಟ್ರಿಕ್ ನಂತೆ ಕೋವಿಡ್ ಮುನ್ನೆಚ್ಚರಿಕೆ ಪಾಲಿಸಿ ಪಡಿತರ ವಿತರಣೆ ಮಾಡಲು ತಿಳಿಸಲಾಗಿದೆ. ಸರ್ವರ್ ತೊಂದರೆ ಸರಿಪಡಿಸಿ ಒಟಿಪಿಯಂತೆ ಆಹಾರಧಾನ್ಯ ವಿತರಣೆಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುತ್ತದೆ ಎಂದು ಆಹಾರ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಕನಕರೆಡ್ಡಿ ನಾರಾಯಣರೆಡ್ಡಿ ಉದಯವಾಣಿ ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next