Advertisement

ಕಲ್ಲರ್ಪೆ ಬಳಿ ಸರಣಿ ಅಪಘಾತ: ಸಂಚಾರ ವ್ಯವಸ್ಥೆ ಅಸ್ತವ್ಯಸ್ತ

05:01 PM Dec 17, 2017 | |

ಸಂಪ್ಯ: ಸಂಪ್ಯದ ಕಲ್ಲರ್ಪೆ ಬಳಿ ಸರಣಿ ಅಪಘಾತ ನಡೆದ ಪರಿಣಾಮ ಕೆಲವು ಹೊತ್ತು ಸಂಚಾರಕ್ಕೆ ಅಡಚಣೆ ಆದ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.

Advertisement

ಪುತ್ತೂರು ಪೇಟೆಯಿಂದ ಸಂಟ್ಯಾರ್‌ ಕಡೆಗೆ ಹೆದ್ದಾರಿಯಲ್ಲಿ ಸಾಗುತ್ತಿದ್ದ ರಿಕ್ಷಾಕ್ಕೆ ಒಳದಾರಿಯಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರಿಕ್ಷಾ ಪಲ್ಟಿಯಾಗಿ ಎದುರಿನಿಂದ ಕೆಟ್ಟು ಹೋದ ವಾಹನವನ್ನು ಎಳೆದು ತರುತ್ತಿದ್ದ ಆಮ್ನಿಗೆ ಢಿಕ್ಕಿ ಹೊಡೆದಿದೆ. ಕಾರ್ಪಾಡಿ ದೇವಸ್ಥಾನದ ದ್ವಾರದಿಂದ ಬಂದ ಕಾರು, ಏಕಾಏಕೀ ಹೆದ್ದಾರಿಗೆ ಬಂದದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ರಿಕ್ಷಾವನ್ನು ಬದಿಗೆ ಸರಿಸಿದರೂ, ಆಮ್ನಿಯನ್ನು ಪಕ್ಕಕ್ಕೆ ಸರಿಸುವುದು ಕಷ್ಟವಾಯಿತು. ಇದರಿಂದಾಗಿ ಎರಡೂ ಕಡೆಯೂ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಬಳಿಕ ಸ್ಥಳೀಯರೇ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next