Advertisement

ಪ್ರತ್ಯೇಕ ರಸ್ತೆ ಅಪಘಾತ: ಇಬ್ಬರ ದುರ್ಮರಣ

11:22 AM Aug 17, 2018 | Team Udayavani |

ಬೆಂಗಳೂರು: ಚಿಕ್ಕಜಾಲ, ದೇವನಹಳ್ಳಿ ಮತ್ತು ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಬೈಕ್‌ ಸವಾರ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಚಿಕ್ಕಜಾಲದ ಬೆಟ್ಟಹಲಸೂರು ಕ್ರಾಸ್‌ ಬಳಿ ರಸ್ತೆ ದಾಟುತ್ತಿದ್ದ ಉಪನ್ಯಾಸಕರೊಬ್ಬರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.

Advertisement

ಸೊಣ್ಣಪ್ಪನಹಳ್ಳಿಯ ಶಕ್ತಿನಗರ ನಿವಾಸಿ ಶ್ರೀನಿವಾಸ್‌ (42) ಮೃತರು. ಶ್ರೀನಿವಾಸ್‌ ಟ್ಯುಟೋರಿಯಲ್‌ ನಡೆಸುತ್ತಿದ್ದರು. ಬುಧವಾರ ರಾತ್ರಿ 9 ಗಂಟೆಗೆ ಊಟ ಮುಗಿಸಿ ವಾಯುವಿಹಾರ ಮಾಡುವ ವೇಳೆ ಘಟನೆ ನಡೆದಿದೆ. ಕಾರಿನ ಸಮೇತ ಚಾಲಕನನ್ನು ಚಿಕ್ಕಜಾಲ ಸಂಚಾರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮತ್ತೂಂದು ಪ್ರಕರಣದಲ್ಲಿ ಹೆಲ್ಮೆಟ್‌ ಧರಿಸದೆ ಇರುವ ಕಾರಣ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದಾನೆ. ಮಂಡಿಬೆಲೆಯ ಶರಣ್‌ (26) ಮೃತ ಯುವಕ. ಸೈಕಲ್‌ ಸವಾರ ಕೌಶಿಕ್‌ ಚೌಧರಿ ಗಾಯಗೊಂಡಿದ್ದಾನೆ. ಕೃಷಿಕ ಶರಣ್‌ ಬುಧವಾರ ರಾತ್ರಿ ಮಂಡಿಬೆಲೆಯಿಂದ ದೇವನಹಳ್ಳಿಗೆ ಬೈಕ್‌ನಲ್ಲಿ ಹೋಗುವಾಗ ಚಿಕ್ಕಸಣ್ಣೇ ಗೇಟ್‌ ಬಳಿ ಮುಂದೆ ಹೋಗುತ್ತಿದ್ದ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಿಂದ ಬಿದಿದ್ದು ಹೆಲ್ಮೆಟ್‌ ಧರಿಸದ ಕಾರಣ ತಲೆಗೆ ಪೆಟ್ಟುಬಿದ್ದು ಸಾವನ್ನಪ್ಪಿದ್ದಾರೆ. ದೇವನಹಳ್ಳಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next