Advertisement

ಮೈಸೂರು : ಹಿರಿಯ ಪತ್ರಕರ್ತ ಪದ್ಮನಾಭ್ ನಿಧನ

05:08 PM May 31, 2022 | Team Udayavani |

ಮೈಸೂರು : ಹಿರಿಯ ಪತ್ರಕರ್ತ ಎಸ್.ಪದ್ಮನಾಭ್ (83) ಸೋಮವಾರ ನಿಧನರಾದರು. ತಿ.ನರಸೀಪುರ ರಸ್ತೆಯಲ್ಲಿರುವ ವಾಸವಿ ಶಾಂತಿಧಾಮ ವೃದ್ಧಾಶ್ರಮದಲ್ಲಿ ಅವರು ವಾಸವಾಗಿದ್ದರು.
ಅವರಿಗೆ ಪುತ್ರಿ ಇದ್ದಾರೆ.

Advertisement

ಎಸ್.ಪದ್ಮನಾಭ್ ಅವರು ಮೂಲತಃ ಸಿನಿಮಾ ಪತ್ರಕರ್ತರಾಗಿದ್ದರು. ಅವರು ಸಿನಿಮಾ ನಟರಾಗಿದ್ದ ಚೇತನ್ ರಾಮರಾವ್ ಅವರ ಸಹೋದರ. ಪದ್ಮನಾಭ ಅವರ ಪತ್ನಿ ನಾಗರತ್ನ ನಿವೃತ್ತ ಶಿಕ್ಷಕಿಯಾಗಿದ್ದು ಅವರು ಕಳೆದ ವರ್ಷ ಕೋವಿಡ್ ನಿಂದ ನಿಧನರಾಗಿದ್ದರು.

ಅವರ ಪುತ್ರಿ ಲತಾ ಅವರು ಅಮೆರಿಕದಿಂದ ಬರಲಿದ್ದು, ಬುಧವಾರ (ಜೂನ್ 1) ಬೆಳಗ್ಗೆ 11 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಭಾರತೀಯರು ಇಂದು ಸುರಕ್ಷಿತವಾಗಿದ್ದಾರೆಂದರೆ ಅದಕ್ಕೆ ಆರೆಸ್ಸೆಸ್ ಕಾರಣ: ಭೈರತಿ ಬಸವರಾಜ್

Advertisement

Udayavani is now on Telegram. Click here to join our channel and stay updated with the latest news.

Next