Advertisement

‘ಭಗವಂತ ನಿಮಗೆ ಒಳ್ಳೆಯದನ್ನು ಮಾಡಲಿ’ : ಉಪ್ಪಿ ಗೆ ಹಿರಿಯ ನಟ ಉಮೇಶ್ ಹಾರೈಕೆ  

04:12 PM May 22, 2021 | Team Udayavani |

ಬೆಂಗಳುರು: ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ಚಿತ್ರರಂಗದ ಕಲಾವಿದರಿಗೆ ನೆರವು ನೀಡುತ್ತಿರುವ ನಟ ಉಪೇಂದ್ರ ಅವರ ಕಾರ್ಯಕ್ಕೆ ಹಿರಿಯ ನಟ ಉಮೇಶ್ ಅವರು ಶುಭ ಹಾರೈಕೆ ಜೊತೆಗೆ ಧನ್ಯವಾದ ಹೇಳಿದ್ದಾರೆ.

Advertisement

ಕೋವಿಡ್ ಎರಡನೇ ಅಲೆಗೆ ಸಿಲುಕಿ ನಲುಗುತ್ತಿರುವ ಕನ್ನಡ ಚಿತ್ರರಂಗದ ಕಲಾವಿದರಿಗೆ, ಕಾರ್ಮಿಕರಿಗೆ ನಟ-ನಿರ್ದೇಶಕ ಉಪೇಂದ್ರ ಅವರು ನೆರವಿನ ಹಸ್ತ ಚಾಚಿದ್ದಾರೆ. ಕೆಲಸ ಇಲ್ಲದೆ ಬದುಕು ನಡಿಸಲು ದುಸ್ತರವಾದಂತಹ ಪರಿಸ್ಥಿತಿಯಲ್ಲಿರುವ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಿಗೆ ಹಾಗೂ ಸಿನಿ ಕಾರ್ಮಿಕರ ಸಾವಿರಾರು ಕುಟುಂಬಗಳಿಗೆ ಆಹಾರ ಹಾಗೂ ದಿನಸಿ ಕಿಟ್ ಹಂಚುವ ಕಾರ್ಯ ಉಪ್ಪಿ ಅವರಿಂದ ನಿರಂತರವಾಗಿ ನಡೆಯುತ್ತಿದೆ.

ಉಪೇಂದ್ರ ಅವರ ಈ ಕಾರ್ಯಕ್ಕೆ ಚಿತ್ರರಂಗದ ಸಾಕಷ್ಟು ಜನರು ಆರ್ಥಿಕವಾಗಿ ಸಹಾಯ ಮಾಡುತ್ತಿದ್ದಾರೆ. ಈ ಹಣದ ಸದುಪಯೋಗ ಮಾಡಿಕೊಂಡು ಅಗತ್ಯ ವಸ್ತುಗಳನ್ನು ಖರೀದಿಸಿ, ಎಲ್ಲರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ ಉಪೇಂದ್ರ.

ಇನ್ನು ಉಪೇಂದ್ರ ಅವರ ಈ ಕಾರ್ಯಕ್ಕೆ ಹಿರಿಯ ಹಾಸ್ಯ ನಟ ಉಮೇಶ್ ಅವರು ಧನ್ಯವಾದ ಹೇಳಿದ್ದಾರೆ. ಇದುವರೆಗೂ ನೀವು ಮಾಡುತ್ತಿರುವ ಸಮಾಜಿಕ ಕಾರ್ಯವನ್ನು ಸುದ್ದಿ ವಾಹಿನಿಗಳಲ್ಲಿ ನೋಡುತ್ತಿದ್ದೇವು. ಇದೀಗ ಅದನ್ನು ಕಣ್ಣಾರೆ ಕಾಣುತ್ತಿದ್ದೇವೆ. ನೀವು ಕಳುಹಿಸಿ ಕೊಟ್ಟ ದಿನಸಿ ಕಿಟ್ ಇಂದು ನಮ್ಮ ಮನೆಗೆ ಬಂದು ತಲುಪಿದೆ. ನಿಮ್ಮ ಈ ಕಾರ್ಯಕ್ಕೆ ಧನ್ಯವಾದಗಳು ಎಂದು ಉಮೇಶ್ ಅವರು ನುಡಿದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next