Advertisement

ತ್ರಿವಳಿ ತಲಾಕ್‌ ಮಸೂದೆಯನ್ನು ಸ್ಥಾಯೀ ಸಮಿತಿಗೆ ಕಳಿಸಿ: DMK

04:59 PM Dec 29, 2017 | udayavani editorial |

ಚೆನ್ನೈ : ತ್ರಿವಳಿ ತಲಾಕ್‌ ನಿಷೇಧಿಸುವ ಮಸೂದೆಯನ್ನು ಲೋಕಸಭೆಯಲ್ಲಿ ತರಾತುರಿಯಿಂದ ಪಾಸು ಮಾಡಿರುವ ಕೇಂದ್ರ ಸರಕಾರವನ್ನು ಡಿಎಂಕೆ ಟೀಕಿಸಿದೆ. ಮಸೂದೆಯನ್ನು ಪಾಸು ಮಾಡುವ ಮುನ್ನ ಅದನ್ನು ಸ್ಥಾಯೀ ಸಮಿತಿಗೆ ಸಲ್ಲಿಸಬೇಕಿತ್ತು ಎಂದು ಅದು ಹೇಳಿದೆ.

Advertisement

ಡಿಎಂಕೆ ಕಾರ್ಯಾಧ್ಯಕ್ಷ  ಎಂ ಕೆ ಸ್ಟಾಲಿನ್‌ ಅವರು ಹೊರಡಿಸಿರುವ ಹೇಳಿಕೆಯಲ್ಲಿ, “ತ್ರಿವಳಿ ತಲಾಕ್‌ ನೀಡುವ ಪುರುಷರಿಗೆ 3 ವರ್ಷಗಳ ಜೈಲು ಶಿಕ್ಷೆ ನೀಡುವ ಕ್ರಮ ಅತ್ಯಂತ ಕಠಿನದ್ದು; ಬಿಜೆಪಿ ಸರಕಾರ ನಿಜಕ್ಕೂ ಮುಸ್ಲಿಂ ಮಹಿಳೆಯರ ಕಲ್ಯಾಣದ ಬಗ್ಗೆ ನೈಜ ಕಳಕಳಿಯನ್ನು ಹೊಂದಿದೆಯೇ?’ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next