Advertisement

ವಿಮಾನ ಪ್ರಯಾಣಕ್ಕೆ ಗಾಯಕ್ವಾಡ್‌ ಸಪ್ತ ಪ್ರಯತ್ನ!

01:55 AM Apr 01, 2017 | Karthik A |

ಹೊಸದಿಲ್ಲಿ: ವಿಮಾನದಲ್ಲಿ ರಾದ್ದಾಂತ ಮಾಡಿಕೊಂಡು ನಿರಂತರವಾಗಿ ಪ್ರಯಾಣ ಸಮಸ್ಯೆ ಎದುರಿಸುತ್ತಿರುವ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್‌, ಮೂರ್‍ನಾಲ್ಕು ದಿನಗಳಲ್ಲಿ ವಿಮಾನ ಪ್ರಯಾಣ ಬೆಳೆಸಲು ಏಳು ಬಾರಿ ಪ್ರಯತ್ನಿಸಿರುವ ಅಂಶ ಬೆಳಕಿಗೆಬಂದಿದೆ. ಪ್ರತಿ ವಿಮಾನ ಪ್ರಯಾಣದ ವೇಳೆ ಗಾಯಕ್ವಾಡ್‌ ಪತ್ತೆ ಕಾರ್ಯವೇ ಈಗ ವಿಮಾನ ಕಂಪನಿ ಗಳಿಗೆ  ಸವಾಲಾಗಿ ಪರಿಣಮಿಸಿದೆ.

Advertisement

ಗಾಯಕ್ವಾಡ್‌ ನಡೆಸಿದ 7 ಯತ್ನಗಳ ಪೈಕಿ 5 ಬಾರಿ ಹೊಸದಿಲ್ಲಿಗೆ ಪ್ರಯಾಣ ಬೆಳೆಸಲು ಪ್ರಯತ್ನಿಸಿದ್ದಾರೆ. ಆದರೆ ವಿಮಾನಯಾನ ಸಿಬಂದಿಗಳು ಖಚಿತ ಮಾಹಿತಿ ಮೇರೆಗೆ ಪ್ರಯಾಣಕ್ಕೆ ಬ್ರೇಕ್‌ ಹಾಕಿದ್ದಾರೆ. ಇನ್ನೆರಡು ಬಾರಿ ಹೊಸ ಟಿಕೆಟ್‌ ಖರೀದಿ ಮೂಲಕ ಪ್ರಯಾಣಕ್ಕೆ ಮುಂದಾಗಿದ್ದರೂ ಅದಕ್ಕೂ ಅವಕಾಶ ಸಿಗದೇ ಮುಖಭಂಗ ಅನುಭವಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next