Advertisement

ಅರೆ ಸೇನಾಪಡೆ ಪಥ ಸಂಚಲನ

04:55 PM Apr 14, 2018 | Team Udayavani |

ಹೊಸಪೇಟೆ: ವಿಜಯನಗರ ವಿಧಾನ ಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನಕ್ಕಾಗಿ ಪೊಲೀಸ್‌ ಹಾಗೂ ಅರೆ ಸೇನಾಪಡೆ ಅಧಿಕಾರಿ ಸಿಬ್ಬಂದಿಗಳು ನಗರದ ಪ್ರಮುಖ ಬೀದಿಗಳಲ್ಲಿ ಶುಕ್ರವಾರ ಪಥಸಂಚಲ ನಡೆಸಿದರು. ಸ್ಥಳೀಯ ಡಿವೈಎಸ್ಪಿ ಜಿ.ಸಿ.ರವಿಕುಮಾರ್‌ ಹಾಗೂ ಅರೆ ಸೇನಾಪಡೆ ಕಾಮಾಂಡರ್‌ ನೇತೃತ್ವದಲ್ಲಿ ನೂರಾರು ಸಿಬ್ಬಂದಿಗಳು ಶಸ್ತ್ರ ಸಜ್ಜಿತರಾಗಿ ನಗರದ ವಿವಿಧ ವೃತ್ತಗಳಲ್ಲಿ ಪಥಸಂಚಲ ನಡೆಸಿ, ಶಾಂತಿಯುತ ಮತದಾನದ ಜಾಗೃತಿ ಮೂಡಿಸಿದರು.

Advertisement

ನಗರದ ವಡಕರಾಯ ದೇವಸ್ಥಾನದಿಂದ ಆರಂಭವಾದ ಪಥಸಂಚಲ, ಮೇನ್‌ಬಜರ್‌ ಮೂಲಕ ಗಾಂಧಿಸರ್ಕಲ್‌, ರೋಟರಿ ವೃತ್ತ ಸೇರಿದಂತೆ ಪ್ರಮುಖ ಬೀದಿಗಳ ಮೂಲಕ ಕೊನೆಯಲ್ಲಿ ನಗರಠಾಣೆ ಪೊಲೀಸ್‌ ಠಾಣೆಯಲ್ಲಿ ಕೊನೆಗೊಂಡಿತು. ಟ್ರಾಫಿಕ್‌ ಸಿಪಿಐ ಅಯ್ಯನಗೌಡ ಪಾಟೀಲ್‌, ಪಿಐಗಳಾದ ಸಿದ್ದೇಶ್ವರ್‌ ಪರಶಪ್ಪ ಭಜಂತ್ರಿ, ಎಲ್ಲಪ್ಪ ಹಾಗೂ ಹುಲ್ಲಪ್ಪ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next