Advertisement

ಪಡಿತರ ಅಕ್ಕಿ ಮಾರಾಟ: ವ್ಯಾಪಾರಿ ವಶಕ್ಕೆ

12:06 PM Dec 22, 2021 | Team Udayavani |

ವಾಡಿ: ಅನ್ನ ಭಾಗ್ಯ ಯೋಜನೆ ಅಕ್ಕಿ ಅಕ್ರಮವಾಗಿ ಖರೀದಿಸಿ ಮಾರಾಟ ದಂಧೆಯಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.

Advertisement

ನಾಲವಾರ ಗ್ರಾಮದ ಕಿರಾಣಿ ಅಂಗಡಿ ವ್ಯಾಪಾರಿ ಮಲ್ಲಯ್ಯಸ್ವಾಮಿ ಬಂಧಿತ ಆರೋಪಿತ.

ರಾವೂರಿನ ಕಿರಾಣಿ ಅಂಗಡಿ ಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿ, ಮಾರುಕಟ್ಟೆಗೆ ಸಾಗಿಸುತ್ತಿದ್ದ ವೇಳೆ ಪಡಿತರ ಅಕ್ಕಿ ಪತ್ತೆಯಾದ ಬಳಿಕ ಆಹಾರ ಇಲಾಖೆ, ಪೊಲೀಸ್‌ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳ ಜಂಟಿ ದಾಳಿ ಮುಂದುವರಿದಿದೆ. ಖಚಿತ ಮಾಹಿತಿ ಮೇರೆಗೆ ನಾಲವಾರ ಗ್ರಾಮದ ಮಲ್ಲಯ್ಯ ಸ್ವಾಮಿ ಎನ್ನುವರ ಕಿರಾಣಿ ಅಂಗಡಿ ಮೇಲೆ ದಾಳಿ ನಡೆದಿದೆ.

ಚಿತ್ತಾಪುರ ತಾಲೂಕು ಆಹಾರ ಇಲಾಖೆ ಶಿರಸ್ತೇದಾರ ಚನ್ನಮಲ್ಲಪ್ಪ ಹೊನಳ್ಳಿ, ವಾಡಿ ಠಾಣೆಪಿ ಎಸ್‌ಐ ವಿಜಯಕುಮಾರ ಭಾವಗಿ, ನಾಲವಾರ ಕಂದಾಯ ಅಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಒಟ್ಟು 1.4 ಲಕ್ಷ ರೂ. ಮೌಲ್ಯದ 40 ಕ್ವಿಂಟಲ್‌ ಅನ್ನಭಾಗ್ಯದ ಅಕ್ಕಿ ಜಪ್ತಿಮಾಡಿಕೊಂಡಿದೆ.

ಆರೋಪಿತ ಮಲ್ಲಯ್ಯ ರೇವಣ ಸಿದ್ಧಯ್ಯ ಸ್ವಾಮಿಯನ್ನು ಬಂಧಿಸಿ ವಶಪಡಿಸಿಕೊಳ್ಳಲಾದ ನೂರಾರು ಅಕ್ಕಿ ಚೀಲಗಳನ್ನು ಟ್ರ್ಯಾಕ್ಟರ್‌ ಮತ್ತು ಇತರ ಗೂಡ್ಸ್‌ ವಾಹನಗಳಲ್ಲಿ ತುಂಬಿ ಠಾಣೆಗೆ ತರಲಾಗಿದೆ. ವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next