Advertisement

ಚಾಂಪಿಯನ್ಸ್‌ ಟ್ರೋಫಿಗೆ ತಂಡ ಆಯ್ಕೆ ಮಾಡಿ: ಬಿಸಿಸಿಐಗೆ ಸೂಚನೆ

01:00 PM May 05, 2017 | Team Udayavani |

ಮುಂಬೈ: ಐಸಿಸಿ ವಿರುದ್ಧ ಆದಾಯ ಹಂಚಿಕೆಯಲ್ಲಿ ಪ್ರಕರಣದಲ್ಲಿ ಸೋಲನುಭ ವಿಸಿರುವ ಬಿಸಿಸಿಐ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ಗೆ ಗೈರಾಗಿ ಸೇಡು ತೀರಿಸಿಕೊಳ್ಳಲು ಯೋಚಿಸುತ್ತಿದೆ. ಚುನಾಯಿತ ಪದಾಧಿಕಾರಿಗಳು ಹೀಗೆ ಯೋಚಿಸುತ್ತಿದ್ದರೆ ನಿಯೋಜಿತ ಆಡಳಿತಾಧಿಕಾರಿಗಳು ಬೇರೆಯೇ ದಾರಿಯಲ್ಲಿದ್ದಾರೆ.

Advertisement

ಬಿಸಿಸಿಐ ಖಡಾಖಂಡಿತವಾಗಿ ಚಾಂಪಿ ಯನ್ಸ್‌ ಟ್ರೋಫಿಯಲ್ಲಿ ಪಾಲ್ಗೊಳ್ಳ ಲೇಬೇಕು. ಅದಕ್ಕಾಗಿ ತಂಡ ಆಯ್ಕೆ ಮಾಡಬೇಕು ಎಂದು ಆಡಳಿತಾಧಿಕಾರಿಗಳು ಹೇಳಿದ್ದಾರೆ. ಬಿಸಿಸಿಐ ಜೂನ್‌ 1ರ ಪ್ರತಿಷ್ಠಿತ ಕೂಟಕ್ಕೆ ತಂಡ ಆಯ್ಕೆ ಮಾಡಬೇಕು. ಐಸಿಸಿ ಏ.25ರ ಗಡುವು ನೀಡಿದ್ದರೂ ಇನ್ನೂ ತಂಡವನ್ನು ಆಯ್ಕೆ ಮಾಡಿಲ್ಲ. ಇದಕ್ಕಾಗಿ ತಕ್ಷಣ ಸಭೆ ಕರೆದು ತಕ್ಷಣ ತಂಡ ಆಯ್ಕೆ ಮಾಡಿ. ತಕ್ಷಣವೇ ಅದನ್ನು ಐಸಿಸಿಗೆ ಕಳುಹಿಸಿಕೊಡಿ ಎಂದು ಬಿಸಿಸಿಐಗೆ ಆಡಳಿತಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.

ಆದ್ದರಿಂದ ಹಂಗಾಮಿ ಕಾರ್ಯದರ್ಶಿ ಅಮಿತಾಭ್‌ ಚೌದರಿಗೆ ತಂಡವನ್ನು ಆಯ್ಕೆ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಭಾರತ ಜಗತ್ತಿನ ಶ್ರೇಷ್ಠ ತಂಡ. ಇಂತಹ ತಂಡಕ್ಕೆ ಅಗತ್ಯ ಬೆಂಬಲವನ್ನು ನೀಡಬೇಕು. ಯಾವುದೇ ಗೊಂದಲ, ಅನಿಶ್ಚಿತತೆ ಎದುರಾಗಬಾರದು. ಈಗಾಗಲೇ ಸಾಕಷ್ಟು ಗೊಂದಲ ಇದೆ. ಅದನ್ನು ಕೂಡಲೇ ಸರಿಪಡಿಸಬೇಕು ಎಂದು ಪದಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next