Advertisement

3600 ಆಹಾರ ಧಾನ್ಯ ಕಿಟ್‌ ವಿತರಣೆ: ಬಸವರಾಜ

01:27 PM Apr 27, 2020 | Naveen |

ಸೇಡಂ: ಕೋವಿಡ್ ಮಹಾಮಾರಿಯಿಂದ ಕಂಗೆಟ್ಟ ಸಾವಿರಾರು ಕುಟುಂಬಗಳಿಗೆ ದಾನಿಗಳು ನೀಡಿದ ಕಿಟ್‌ಗಳನ್ನು ಪ್ರಾಮಾಣಿಕವಾಗಿ ತಲುಪಿಸಲಾಗಿದೆ ಎಂದು ತಹಶೀಲ್ದಾರ್‌ ಬಸವರಾಜ ಬೆಣ್ಣೆಶಿರೂರ ಹೇಳಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಕರೆದ ಎನ್‌ಜಿಒ, ದಾನಿಗಳ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಮಳಖೇಡ ರಾಜಶ್ರೀ ಸಿಮೆಂಟ್‌ ಕಾರ್ಖಾನೆ, ಅಜೀಂ ಪ್ರೇಮಜಿ ಫೌಂಡೇಷನ್‌, ಮಾರ್ವಾಡಿ ಸಮಾಜ, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೀಗೆ ಹಲವಾರು ದಾನಿಗಳಿಂದ ಪಡೆದಂತಹ ದವಸ ಧಾನ್ಯ, ಅಡುಗೆ ಸಾಮಗ್ರಿಗಳ 3600 ಕಿಟ್‌ಗಳನ್ನು ಈಗಾಗಲೇ ಅವಶ್ಯಕತೆ ಇರುವ ಕುಟುಂಬಗಳಿಗೆ ತಲುಪಿಸಲಾಗಿದೆ. ಯಾವುದೇ ಪಕ್ಷ ಬೇಧ, ಜಾತಿ ಬೇಧ ಮಾಡದೇ ಕಷ್ಟದಲ್ಲಿರುವವರಿಗೆ ಕಿಟ್‌ ಗಳನ್ನು ಸರಬರಾಜು ಮಾಡಲಾಗಿದೆ. ಪಡಿತರ ಕಾರ್ಡ್‌ ಹೊಂದಿರದವರು ಹಾಗೂ ಪಡಿತರಕ್ಕಾಗಿ ಅರ್ಜಿ ಹಾಕದ 1800 ಕುಟುಂಬಗಳನ್ನು ಗುರುತಿಸಲಾಗಿದ್ದು, ಅವರಿಗೂ ಸಹ ದವಸ ಧಾನ್ಯ ತಲುಪಿಸಲಾಗುತ್ತಿದೆ. ಈಗ ಸರ್ಕಾರದ ಆದೇಶದಂತೆ ವಿವಿಧ ರೀತಿಯಲ್ಲಿ ಜನರಿಗೆ ನೆರವಾದ ಎನ್‌.ಜಿ.ಒಗಳು, ವೈಯಕ್ತಿಕ ದಾನಿಗಳ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮುಂದೆ ದಾನಿಗಳಿಗೆ ಅನುಕೂಲವಾಗಲಿದೆ.

ವೈದ್ಯಕೀಯ ಸಿಬ್ಬಂದಿಗೆ ಹೆಚ್ಚಿನ ಮಾಸ್ಕ್ ಮತ್ತು ಸ್ಯಾನಿಟೈಸರ್‌ ಅವಶ್ಯಕತೆ ಇದೆ ಈ ಬಗ್ಗೆ ದಾನ ಮಾಡುವವರು ಮಾಡಬಹುದಾಗಿದ್ದು, ಮಳಖೇಡದ ರಾಜಶ್ರೀ ಸಿಮೆಂಟ್‌ ಕಾರ್ಖಾನೆಯವರು ಸಾವಿರಾರು ಕಿಟ್‌ ಗಳನ್ನು ನೀಡಿದ್ದಾರೆ. ಜತೆಗೆ ಶ್ರೀಸಿಮೆಂಟ್‌ ಮತ್ತು ವಾಸವದತ್ತಾ ಸಿಮೆಂಟ್‌ ಆಡಳಿತ ಮಂಡಳಿಯೂ ಸಹ ಜನರ ನೆರವಿಗೆ ಬರಬೇಕು ಎಂದರು.

ಉಪ ತಹಶೀಲ್ದಾರ್‌ ನಾಗನಾಥ ತರಗೆ, ಉದ್ಯಮಿಗಳಾದ ರಮೇಶ ತಾಪಾಡಿಯಾ, ಶ್ರೀನಿವಾಸ ಕಾಸೋಜು, ಭರತ ಬಜಾಜ, ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು, ಮುಖಂಡರಾದ ನಾಗೇಶ್ವರರಾವ್‌ ಮಾಲಿಪಾಟೀಲ, ಸುದರ್ಶನರೆಡ್ಡಿ ಪಾಟೀಲ, ರಾಜಶ್ರೀ ಕಾರ್ಖಾನೆಯ ಚಂದಮ್ಮ ಅಂಬಲಗಿ, ಓಂಪ್ರಕಾಶ ಪಾಟೀಲ, ದತ್ತಾತ್ರೇಯ ಐನಾಪುರ, ಶ್ರೀನಿವಾಸ ಬಳ್ಳಾರಿ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next