Advertisement

ಬಿಗಿ ಭದ್ರತೆ: ಮಂಗಳೂರು ಏರ್ ಪೋರ್ಟ್ ಗೆ ಹೋಗುವವರು ಬೇಗ ಹೊರಡಿ

10:19 AM Jan 22, 2020 | keerthan |

ಮಂಗಳೂರು: ಬಾಂಬ್‌ ಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಸುತ್ತಮುತ್ತ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಈ ಹಿಂದೆ ನಿಲ್ದಾಣಕ್ಕೆ ಹೋಗಬೇಕಾದರೆ ಟರ್ಮಿನಲ್‌ಗೆ ಪ್ರವೇಶಿಸುವವರೆಗೆ ಎಲ್ಲಿಯೂ ಪೊಲೀಸರಿಂದ ಪ್ರಯಾಣಿಕರು ತಪಾಸಣೆಗೆ ಒಳಗಾಗಬೇಕಾಗಿರಲಿಲ್ಲ. ನೇರವಾಗಿ ವಿಮಾನ ನಿಲ್ದಾಣದೊಳಗೆ ಬಂದು ಅನಂತರದ ಭದ್ರತಾ ಕ್ರಮಗಳನ್ನು ಪಾಲಿಸಿದರೆ ಸಾಕಿತ್ತು.

Advertisement

ಆದರೆ ಈ ಘಟನೆಯ ಬಳಿಕ ವಿಮಾನ ನಿಲ್ದಾಣಕ್ಕೆ ಬಂದು ಹೋಗುವ ಪ್ರಯಾಣಿಕರು ಸೇರಿದಂತೆ ಎಲ್ಲರನ್ನೂ ಹಲವು ಕಡೆಗಳಲ್ಲಿ ಪೊಲೀಸರು ಬಿಗಿ ತಪಾಸಣೆಗೆ ಒಳಪಡಿಸುತ್ತಿದ್ದಾರೆ.

ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸಿ ಹೆಚ್ಚು ಹೊತ್ತು ತಪಾಸಣೆಗೆ ಒಳಪಡಿಸಲಾಗುತ್ತಿರುವುದು ಭದ್ರತೆ ದೃಷ್ಟಿಯಿಂದ ಉತ್ತಮ ಬೆಳವಣಿಗೆ.

ಈ ಕಾರಣಕ್ಕೆ ವಿಮಾನದಲ್ಲಿ ಪ್ರಯಾಣಿಸಲು ಹೋಗುವವರು ಇನ್ನು ಸ್ವಲ್ಪ ಮುಂಚಿತವೇ ಮನೆಯಿಂದ ಹೊರಡುವುದು ಉತ್ತಮ. ಇಲ್ಲದಿದ್ದರೆ ತಪಾಸಣೆ ಕಾರಣಕ್ಕೆ ಉದ್ದೇಶಿತ ಸಮಯದೊಳಗೆ ನಿಲ್ದಾಣ ಸೇರುವುದಕ್ಕೆ ಕಷ್ಟವಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next