Advertisement

ಕಾಂಗ್ರೆಸ್ ರಾಜ್ಯಾಧ್ಯಕ್ಷನ ಬೆದರಿಕೆ…ನಟ ಅಮಿತಾಭ್ ಮನೆಗೆ ಭದ್ರತೆ ಹೆಚ್ಚಳ

07:42 PM Feb 21, 2021 | Team Udayavani |

ಮುಂಬೈ : ಇಂಧನ ಬೆಲೆ ಏರಿಕೆ ವಿರುದ್ಧ ಮೌನವಾಗಿದ್ದಾರೆ ಎಂದು ಬಾಲಿವುಡ್ ತಾರೆಯರ ವಿರುದ್ಧ ಮಹಾರಾಷ್ಟ್ರ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಾನಾ ಪಟೋಲೆ ಬೆದರಿಕೆ ಹಿನ್ನೆಲೆ ಜಲ್ಸಾದಲ್ಲಿರುವ ನಟ ಅಮಿತಾಭ್ ಬಚ್ಚನ್ ಅವರ ಮನೆಗೆ ಭದ್ರತೆ ಹೆಚ್ಚಿಸಲಾಗಿದೆ.

Advertisement

ಕಳೆದೆರಡು ದಿನಗಳ ಹಿಂದೆ ಅಮಿತಾಭ್ ಹಾಗೂ ಅಕ್ಷಯ್ ಕುಮಾರ್ ವಿರುದ್ಧ ಹರಿಹಾಯ್ದಿದ್ದ ಪಟೋಲೆ, ಕಾಂಗ್ರೆಸ್ ಅಧಿಕಾರದ ವೇಳೆ ಬೆಲೆ ಏರಿಕೆ ವಿರುದ್ಧ ಟ್ವೀಟ್ ಮಾಡಿದ್ದ ಈ ನಟರು ಈಗೇಕೆ (ಬಿಜೆಪಿ ಸರ್ಕಾರದ ವಿರುದ್ಧ) ಮೌನವಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು. ಜತೆಗೆ ಈ ನಟರ ಸಿನಿಮಾಗಳ ಶೂಟಿಂಗ್ ಹಾಗೂ ಪ್ರದರ್ಶನಕ್ಕೆ ಅನುಮತಿ ನೀಡುವುದಿಲ್ಲ ಎಂದು ಎಚ್ಚರಿಕೆ ಕೂಡ ನೀಡಿದ್ದರು.

ಶನಿವಾರ (ಫೆ.20) ಮತ್ತೆ ವಾಗ್ದಾಳಿ ಮುಂದುವರೆಸಿದ್ದ ಪಟೋಲೆ, ನಾನು ಟೀಕಿಸಿದ್ದು ಅಮಿತಾಭ್ ಹಾಗೂ ಅಕ್ಷಯ್ ಕುಮಾರ್ ಅವರನ್ನಲ್ಲ, ಬದಲಾಗಿ ಅವರ ಕೆಲಸವನ್ನು. ಅವರು ನಿಜವಾದ ನಾಯಕರಲ್ಲ. ಒಂದು ವೇಳೆ ಅವರು ಸಂಕಷ್ಟದಲ್ಲಿರುವ ಜನರ ಬೆಂಬಲಾಗಿ ನಿಂತಿದ್ದರೆ ರಿಯಲ್ ಹೀರೋಗಳಾಗುತ್ತಿದ್ದರು. ಈಗಲೂ ಅವರು ಕಾಗದದ ಮೇಲಿನ ಸಿಂಹಗಳಂತೆ ಇರುವುದಾಗಿ ಬಯಸಿದರೆ ನಮಗೆ ಯಾವುದೇ ಸಮಸ್ಯೆಯಿಲ್ಲ ಎಂದು ಕುಟುಕಿದ್ದಾರೆ.

ಕಾಂಗ್ರೆಸ್ ನಾಯಕನ ಎಚ್ಚರಿಕೆ ಹಿನ್ನೆಲೆ ಅಮಿತಾಭ್ ಮನೆಗಿರುವ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇಬ್ಬರು ಪೊಲೀಸ್ ಇಬ್ಬಂದಿ ಜತೆಗೆ ಒಂದು ವಾಹನ ಮನೆ ಎದುರು ನಿಂತಿದೆ. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಸಹ ನಟರಿಗೆ ಬೆಂಬಲ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next