Advertisement

ಕೋವಿಡ್ 19 ಪ್ಯಾಕೇಜ್‌ನ 2ನೇ ಕಂತು: 22 ರಾಜ್ಯಗಳಿಗೆ 890 ಕೋ.ರೂ. ಬಿಡುಗಡೆ

02:19 AM Aug 07, 2020 | Hari Prasad |

ಹೊಸದಿಲ್ಲಿ: ಕರ್ನಾಟಕ ಸಹಿತ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ 19 ಪ್ಯಾಕೇಜ್‌ನ ಎರಡನೇ ಕಂತಿನ ಮೊತ್ತವನ್ನು ಕೇಂದ್ರ ಗುರುವಾರ ಬಿಡುಗಡೆ ಮಾಡಿದೆ.

Advertisement

ಪ್ಯಾಕೇಜ್‌ನಡಿ 890.32 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಆಯಾ ರಾಜ್ಯಗಳ ಕೋವಿಡ್ 19 ಪ್ರಕರಣಗಳಿಗೆ ಅನುಗುಣವಾಗಿ ಆರ್ಥಿಕ ನೆರವು ಹಂಚಿಕೆಯಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕರ್ನಾಟಕ, ಛತ್ತೀಸ್‌ಗಢ, ಝಾರ್ಖಂಡ್‌, ಕೇರಳ, ಪಂಜಾಬ್‌, ತಮಿಳುನಾಡು, ಪಶ್ಚಿಮ ಬಂಗಾಲ ಸೇರಿದಂತೆ 20 ರಾಜ್ಯಗಳು ಎರಡನೇ ಹಂತದ ಮೊತ್ತವನ್ನು ಪಡೆದಿವೆ.

ಗುಣಮುಖ ದರ ಶೇ. 50ಕ್ಕೆ
ರಾಜ್ಯದಲ್ಲಿ ಕೋವಿಡ್ 19 ಸೋಂಕುಪೀಡಿತರ ಸಂಖ್ಯೆ ವೃದ್ಧಿಸುವುದರ ಜತೆಗೆ ಗುಣಮುಖರಾದವರ ಸಂಖ್ಯೆಯೂ ಹೆಚ್ಚಿದೆ. ಚೇತರಿಸಿಕೊಂಡವರ ಒಟ್ಟು ಸಂಖ್ಯೆ 80 ಸಾವಿರ ಗಡಿ ದಾಟುವ ಮೂಲಕ ಗುಣಮುಖ ದರ ಶೇ.50ಕ್ಕೆ ಏರಿರುವುದು ಸಮಾಧಾನಕರ ಅಂಶ. ಜು. 20ಕ್ಕೆ ರಾಜ್ಯದಲ್ಲಿ ಗುಣಮುಖ ದರ ಶೇ.35 ಇತ್ತು. ಅನಂತರ ಚೇತರಿಸಿಕೊಳ್ಳುವವರ ಸಂಖ್ಯೆ ನಿರಂತರ ಏರುತ್ತ ಸಾಗಿತು.

ಉಡುಪಿ: 217, ದ.ಕ.: 173 ಪಾಸಿಟಿವ್‌
ಉಡುಪಿ ಜಿಲ್ಲೆಯಲ್ಲಿ ಗುರುವಾರ 217 ಮಂದಿಗೆ ಪಾಸಿಟಿವ್‌ ಬಂದಿದ್ದು, ನಾಲ್ಕು ಸಾವು ಸಂಭವಿಸಿವೆ.  ದ.ಕ.ದಲ್ಲಿ 173 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದರೆ 11 ಮಂದಿ ಮೃತಪಟ್ಟಿದ್ದಾರೆ. ಕೊಡಗಿನಲ್ಲಿ 25, ಕಾಸರಗೋಡಿನಲ್ಲಿ 153 ಪಾಸಿಟಿವ್‌ ವರದಿಯಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next