Advertisement

ಸೀಟು ಹಂಚಿಕೆ : ಗೌಡರು ಗರಂ 

12:30 AM Feb 22, 2019 | Team Udayavani |

ಬೆಂಗಳೂರು: ಸೀಟು ಹಂಚಿಕೆ ಅಂತಿಮವಾಗುವ ಆಗುವ ಮುಂಚೆಯೇ ಕಾಂಗ್ರೆಸ್‌ ನಾಯಕರು ಜೆಡಿಎಸ್‌ಬಗ್ಗೆ ಮಾತನಾಡುತ್ತಿರುವುದು ಮೈತ್ರಿ ಧರ್ಮವೇ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಗರಂ ಆಗಿದ್ದಾರೆ.

Advertisement

ಲೋಕಸಭೆ ಚುನಾವಣೆ ಸೀಟು ಹಂಚಿಕೆ ಕುರಿತು ಚರ್ಚಿಸುವ ಸಲುವಾಗಿ ಪದ್ಮನಾಭನಗರ ನಿವಾಸಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರ ಮಂದೆ, ಕಾಂಗ್ರೆಸ್‌ ನಾಯಕರ ಇತ್ತೀಚೆಗಿನ ಹೇಳಿಕೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸೀಟು ಹಂಚಿಕೆ ಮಾತುಕತೆ ನಡೆಯುವ ಮುನ್ನವೇ ಇವರೇ ಅಭ್ಯರ್ಥಿ ಎಂದು ಒಬ್ಬರು ಘೋಷಿಸುತ್ತಾರೆ.ಹಾಸನ, ಮಂಡ್ಯ ಬಿಟ್ಟುಕೊಡುವುದಿಲ್ಲ ಎಂದು ಮತ್ತೂಬ್ಬರು ಹೇಳುತ್ತಾರೆ. ನಾಯಕರು ಬಿಟ್ಟು ಜಿಲ್ಲಾ ಮುಖಂಡರು ಮಾತನಾಡುತ್ತಾ ಹೋದರೆ ಹೇಗೆ ಎಂದು ಪ್ರಶ್ನಿಸಿದರು ಎಂದು ಹೇಳಲಾಗಿದೆ. ಇದಕ್ಕೆ ಸಮರ್ಥನೆ ಕೊಟ್ಟ ದಿನೇಶ್‌ ಗುಂಡೂರಾವ್‌, ಸೀಟು ಹಂಚಿಕೆ ಸೇರಿ ಜೆಡಿಎಸ್‌ ನಾಯಕರ ಬಗ್ಗೆ ಮಾತನಾಡದಂತೆ ಕಾಂಗ್ರೆಸ್‌ ಮುಖಂಡರಿಗೆ ಸೂಚಿಸಲಾಗಿದೆ. ಇನ್ಮೆàಲೆ ಯಾರೂ ಮಾತನಾಡುವುದಿಲ್ಲ ಎಂದು ತಿಳಿಸಿದರು ಎನ್ನಲಾಗಿದೆ.

ಮತ್ತೂಂದು ಹಂತದ ಮಾತುಕತೆ: ದೇವೇಗೌಡರ ಭೇಟಿ ನಂತರ ಸುದ್ದಿಗಾರರ ಜತೆ ಮಾತನಾಡಿದ ದಿನೇಶ್‌ ಗುಂಡೂರಾವ್‌, ಸೀಟು ಹಂಚಿಕೆ ಹಾಗೂ ಮೈತ್ರಿ ಬಗ್ಗೆ ಮಾತನಾಡಿದ್ದೇವೆ. ಮತ್ತೂಂದು ಸುತ್ತಿನ ಸಭೆ ನಡೆಯಬೇಕಿದೆ ಎಂದು ಹೇಳಿದರು. ದೇವೇಗೌಡರ ಜತೆ ನಡೆಸಿದ ಮಾತುಕತೆ ವಿವರ ಹೈಕಮಾಂಡ್‌ಗೆ ನೀಡಲಿದ್ದೇನೆ ಎಂದು ಹೇಳಿ ದಿನೇಶ್‌ ಗುಂಡೂರಾವ್‌ ನಿರ್ಗಮಿಸಿದರು.

ಮೂಡದ ಒಮ್ಮತ
ಲೋಕಸಭೆ ಚುನಾವಣೆ ಸೀಟು ಹಂಚಿಕೆ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ದೇವೇಗೌಡರ ಜತೆ ನಡೆಸಿದ ಮೊದಲ ಹಂತದ ಮಾತುಕತೆಯಲ್ಲಿ ಒಮ್ಮತ ಮೂಡಲಿಲ್ಲ. ಜೆಡಿಎಸ್‌ಗೆ 12 ಸೀಟು ಬಿಟ್ಟುಕೊಡಬೇಕು ಎಂಬುದು ನಮ್ಮ ಬೇಡಿಕೆ. ಕಾಂಗ್ರೆಸ್‌ ಗೆದ್ದಿರುವ ಕ್ಷೇತ್ರ, ಜೆಡಿಎಸ್‌ ಗೆದ್ದಿರುವ ಕ್ಷೇತ್ರ ಎಂಬ ಆಧಾರದ ಮೇಲೆ ಸೀಟು ಹಂಚಿಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ದೇವೇಗೌಡರು ಹೇಳಿದರು.

ಕಾಂಗ್ರೆಸ್‌ ಸಂಸದರು ಇರುವ ಹತ್ತು ಕ್ಷೇತ್ರಗಳನ್ನು ಬಿಟ್ಟುಕೊಡುವುದು ಬೇಡ ಎಂಬ ಒತ್ತಾಯ ಇತ್ತೀಚೆಗೆ ನಡೆದ ಕಾಂಗ್ರೆಸ್‌ ಸಮನ್ವಯ ಸಮಿತಿ ಸಭೆಯಲ್ಲಿ ವ್ಯಕ್ತವಾದ ಬಗ್ಗೆಯೂ ದಿನೇಶ್‌ ಗೌಡರ ಗಮನಕ್ಕೆ ತಂದರು. ಎರಡೂ ಪಕ್ಷಗಳ ಉದ್ದೇಶ ಬಿಜೆಪಿ ಸೋಲಿ ಸುವುದು.ಸೀಟು ಹಂಚಿಕೆ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿವರ ಜತೆಯೇ ಚರ್ಚಿಸುತ್ತೇನೆ. ನೀವೂ ಬನ್ನಿ ಅಲ್ಲೇ ಇತ್ಯರ್ಥವಾಗಲಿ ಎಂದು ದೇವೇಗೌಡರು ತಿಳಿಸಿದರು ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next