Advertisement
ಲೋಕಸಭೆ ಚುನಾವಣೆ ಸೀಟು ಹಂಚಿಕೆ ಕುರಿತು ಚರ್ಚಿಸುವ ಸಲುವಾಗಿ ಪದ್ಮನಾಭನಗರ ನಿವಾಸಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಮಂದೆ, ಕಾಂಗ್ರೆಸ್ ನಾಯಕರ ಇತ್ತೀಚೆಗಿನ ಹೇಳಿಕೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸೀಟು ಹಂಚಿಕೆ ಮಾತುಕತೆ ನಡೆಯುವ ಮುನ್ನವೇ ಇವರೇ ಅಭ್ಯರ್ಥಿ ಎಂದು ಒಬ್ಬರು ಘೋಷಿಸುತ್ತಾರೆ.ಹಾಸನ, ಮಂಡ್ಯ ಬಿಟ್ಟುಕೊಡುವುದಿಲ್ಲ ಎಂದು ಮತ್ತೂಬ್ಬರು ಹೇಳುತ್ತಾರೆ. ನಾಯಕರು ಬಿಟ್ಟು ಜಿಲ್ಲಾ ಮುಖಂಡರು ಮಾತನಾಡುತ್ತಾ ಹೋದರೆ ಹೇಗೆ ಎಂದು ಪ್ರಶ್ನಿಸಿದರು ಎಂದು ಹೇಳಲಾಗಿದೆ. ಇದಕ್ಕೆ ಸಮರ್ಥನೆ ಕೊಟ್ಟ ದಿನೇಶ್ ಗುಂಡೂರಾವ್, ಸೀಟು ಹಂಚಿಕೆ ಸೇರಿ ಜೆಡಿಎಸ್ ನಾಯಕರ ಬಗ್ಗೆ ಮಾತನಾಡದಂತೆ ಕಾಂಗ್ರೆಸ್ ಮುಖಂಡರಿಗೆ ಸೂಚಿಸಲಾಗಿದೆ. ಇನ್ಮೆàಲೆ ಯಾರೂ ಮಾತನಾಡುವುದಿಲ್ಲ ಎಂದು ತಿಳಿಸಿದರು ಎನ್ನಲಾಗಿದೆ.
ಲೋಕಸಭೆ ಚುನಾವಣೆ ಸೀಟು ಹಂಚಿಕೆ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೇವೇಗೌಡರ ಜತೆ ನಡೆಸಿದ ಮೊದಲ ಹಂತದ ಮಾತುಕತೆಯಲ್ಲಿ ಒಮ್ಮತ ಮೂಡಲಿಲ್ಲ. ಜೆಡಿಎಸ್ಗೆ 12 ಸೀಟು ಬಿಟ್ಟುಕೊಡಬೇಕು ಎಂಬುದು ನಮ್ಮ ಬೇಡಿಕೆ. ಕಾಂಗ್ರೆಸ್ ಗೆದ್ದಿರುವ ಕ್ಷೇತ್ರ, ಜೆಡಿಎಸ್ ಗೆದ್ದಿರುವ ಕ್ಷೇತ್ರ ಎಂಬ ಆಧಾರದ ಮೇಲೆ ಸೀಟು ಹಂಚಿಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ದೇವೇಗೌಡರು ಹೇಳಿದರು.
Related Articles
Advertisement