Advertisement

Khalistani ಉಗ್ರರ ವರ್ತನೆಗೆ ಸ್ಕಾಟ್‌ಲ್ಯಾಂಡ್‌ ಗುರುದ್ವಾರ ತೀವ್ರ ಖಂಡನೆ;ಪೊಲೀಸ್ ತನಿಖೆ

07:21 PM Oct 01, 2023 | Team Udayavani |

ಲಂಡನ್:ಯುಕೆಯಲ್ಲಿರುವ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರ ಯೋಜಿತ ಭೇಟಿಯನ್ನು ತಡೆದ ಖಾಲಿಸ್ಥಾನಿ ಉಗ್ರರ ವರ್ತನೆಯನ್ನು ಸ್ಕಾಟ್‌ಲ್ಯಾಂಡ್‌ನ ಗುರುದ್ವಾರವು ತೀವ್ರವಾಗಿ ಖಂಡಿಸಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದೆ.

Advertisement

ಗ್ಲಾಸ್ಗೋ ಗುರುದ್ವಾರ ಗುರು ಗ್ರಂಥ ಸಾಹಿಬ್ ಸಿಖ್ ಸಭಾ ಶನಿವಾರ ರಾತ್ರಿ ನೀಡಿದ ಹೇಳಿಕೆಯಲ್ಲಿ, ಅಜ್ಞಾತ ಮತ್ತು ಅಶಿಸ್ತಿನ ವ್ಯಕ್ತಿಗಳು ಪೂಜಾ ಸ್ಥಳದಲ್ಲಿ ಶಾಂತಿಯನ್ನು ಕದಡಿ, ರಾಯಭಾರಿಯ ವೈಯಕ್ತಿಕ ಭೇಟಿಗೆ ಅಡ್ಡಿಪಡಿಸಲು ಪ್ರಯತ್ನಿಸಿದರು ಎಂದು ಹೇಳಿದೆ.

“ಗ್ಲ್ಯಾಸ್ಗೋ ಪ್ರದೇಶದ ಹೊರಗಿನ ಕೆಲವು ಅಪರಿಚಿತ ವ್ಯಕ್ತಿಗಳು ಭೇಟಿಗೆ ಅಡ್ಡಿಪಡಿಸಲು ಪ್ರಯತ್ನಿಸಿದರು ಎಂದು ಗುರುದ್ವಾರ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಶನಿವಾರ, ಸ್ಕಾಟ್ಲೆಂಡ್‌ನ ಹೊರಗಿನ ಪ್ರದೇಶಗಳ ಮೂವರು ಸಮುದಾಯ ಮತ್ತು ಕಾನ್ಸುಲರ್ ಸಮಸ್ಯೆಗಳನ್ನು ಚರ್ಚಿಸಲು ನಡೆಸಲಾಗಿದ್ದ ಸಂವಾದವನ್ನು ಅಡ್ಡಿಪಡಿಸಿದ್ದಾರೆ ಎಂದು ಭಾರತೀಯ ಹೈಕಮಿಷನ್ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next