Advertisement

Bantwal: ಬಿ.ಸಿ. ರೋಡ್ -ಪೊಸಳ್ಳಿ; ಸ್ಕೂಟರ್‌ ಕಳವು: ಪ್ರಕರಣ ದಾಖಲು

08:22 PM Aug 15, 2024 | Team Udayavani |

ಬಂಟ್ವಾಳ:ಬಿ.ಸಿ. ರೋಡಿನ ಪೊಸಳ್ಳಿಯ ಕುಲಾಲ ಭವನದ ಬಳಿ ವ್ಯಕ್ತಿಯೊಬ್ಬರು ನಿಲ್ಲಿಸಿ ಹೋಗಿದ್ದ ಸ್ಕೂಟರ್‌ ಕಳವಾದ ಘಟನೆ ಆ. 11ರಂದು ನಡೆದಿದೆ.

Advertisement

ಚೇಳೂರು ನಿವಾಸಿ ಚಿನ್ನಯ್ಯ ಸಾಲಿಯಾನ್‌ ಅವರು ಪೊಸಳ್ಳಿಯ ಕುಲಾಲ ಭವನದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದು, ಭವನದ ಬಳಿ ಸ್ಕೂಟರ್‌ ನಿಲ್ಲಿಸಿ ಹೋಗಿದ್ದರು. ಆದರೆ ಕೆಲವು ಗಂಟೆಗಳ ಬಳಿಕ ಬಂದು ನೋಡಿದಾಗ ಸ್ಕೂಟರ್‌ ಅಲ್ಲಿರಲಿಲ್ಲ. ಬಳಿಕ ಭವನದ ಸಿಸಿ ಕೆಮರಾ ಪರಿಶೀಲಿಸಿದಾಗ ವ್ಯಕ್ತಿಯೋರ್ವ ಸ್ಕೂಟರ್‌ ಚಲಾಯಿಸಿಕೊಂಡು ಪರಾರಿಯಾಗಿರುವ ದೃಶ್ಯ ಸೆರೆಯಾಗಿದೆ.

ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next