Advertisement

“ಸರ್ಕಾರ್‌’ಗೆ ಬಿತ್ತು ಕತ್ತರಿ

08:26 AM Nov 10, 2018 | |

ಚೆನ್ನೈ: ತಮಿಳುನಾಡು ಸರಕಾರದ ಆಕ್ರೋಶಕ್ಕೆ ಗುರಿಯಾಗಿರುವ “ಸರ್ಕಾರ್‌’ ಸಿನಿಮಾದ ನಾಲ್ಕು ದೃಶ್ಯಗಳಿಗೆ ಕತ್ತರಿ ಹಾಕಲು, ಮೂರು ಸಂಭಾಷಣೆಗಳನ್ನು ಮ್ಯೂಟ್‌ ಮಾಡಲು ತೀರ್ಮಾನಿಸಿದೆ.  ಸಿನಿಮಾ ನಿರ್ಮಾಣ ಸಂಸ್ಥೆ ಸನ್‌ ಪಿಕ್ಚರ್ಸ್‌ ಒಪ್ಪಿಗೆ ನೀಡಿದೆ. ಈ ಮೂಲಕ ಅದು ಒತ್ತಡಕ್ಕೆ ಮಣಿದಿದೆ. ಇದೇ ವೇಳೆ ತಮ್ಮ ಬಂಧಿಸದಂತೆ ಕೋರಿ ಮದ್ರಾಸ್‌ ಹೈಕೋರ್ಟ್‌ಗೆ ನಿರ್ದೇಶಕ ಮುರುಗದಾಸ್‌ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ಹೈಕೋರ್ಟ್‌ ನ.27ರವರೆಗೆ ಅವರನ್ನು ಬಂಧಿಸಬಾರದು ಎಂದು ಪೊಲೀಸರಿಗೆ ನಿರ್ದೇಶನ ನೀಡಿದೆ. ಇದೇ ವೇಳೆ ಸಿನಿಮಾ ನಿಷೇಧಕ್ಕೆ ಒತ್ತಡ ಹೇರುತ್ತಿರುವ ಎಐಎಡಿಎಂಕೆ ಸರಕಾರದ ಕ್ರಮವನ್ನು ತಮಿಳು ಸೂಪರ್‌ಸ್ಟಾರ್‌ ರಜನಿಕಾಂತ್‌ ಟೀಕಿಸಿದ್ದಾರೆ.  

Advertisement

ಸೆನ್ಸಾರ್‌ನಿಂದ ಪ್ರಮಾಣಪತ್ರ ಪಡೆದ ಸಿನಿಮಾ ನಿಷೇಧಕ್ಕೆ ಆಗ್ರಹಿಸುವುದು ಕಾನೂನು ಬಾಹಿರ ಎಂದಿದ್ದಾರೆ. ಈ ಎಲ್ಲಾ ವಿವಾದಗಳ ಹೊರತಾಗಿಯೂ ವಿಜಯ್‌ ನಟಿಸಿರುವ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 100 ಕೋಟಿ ರೂ. ಬಾಚಿಕೊಂಡಿದೆ.
 

Advertisement

Udayavani is now on Telegram. Click here to join our channel and stay updated with the latest news.

Next