Advertisement

Kundapura: ಮರ ಬಿದ್ದು ಧರೆಗುರುಳಿದ ವಿದ್ಯುತ್ ಕಂಬಗಳು.. ಸ್ವಲ್ಪದರಲ್ಲೇ ಪಾರಾದಾ ಶಾಲಾ‌ ಬಸ್

11:00 AM Jul 13, 2024 | Team Udayavani |

ಕುಂದಾಪುರ: ಬೃಹತ್ ಮರ ಬಿದ್ದು ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್ ತಂತಿಗಳು ರಸ್ತೆಗೆ ಬಿದ್ದಿದ್ದು, ಅದೃಷ್ಟವಶಾತ್ ಸ್ವಲ್ಪದರಲ್ಲೇ ಶಾಲಾ ಬಸ್ಸೊಂದು ಪಾರಾದ ಘಟನೆ ಹೆಮ್ಮಾಡಿ ಗ್ರಾಮದ ಸಂತೋಷ್ ನಗರ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.

Advertisement

ಗಾಳಿ ಮಳೆಗೆ ಬೃಹತ್ ಮರವೊಂದು ಕೆಳಕ್ಕುರುಳಿದೆ. ಇದರಿಂದಾಗಿ ವಿದ್ಯುತ್ ತಂತಿಗಳು ಸಹ ಧಾರಾಶಾಹಿಯಾಗಿವೆ.‌ ಸಂಚಾರ ಅಸ್ತವ್ಯಸ್ತಗೊಂಡಿದೆ. ಶಾಲೆ ಬಸ್ಸೊಂದು ಇದೇ ಮಾರ್ಗವಾಗಿ ಸಂಚರಿಸುತ್ತಿದ್ದು, ಮರ ಬಿದ್ದಾಗ ಆ ಬಸ್ ಕೇವಲ 20 ಮೀ. ದೂರದಲ್ಲಿತ್ತು. ಅದೃಷ್ಟವಶಾತ್ ದೊಡ್ಡ ದುರಂತವೊಂದು ತಪ್ಪಿದೆ.

ಸ್ಥಳಕ್ಕೆ ಮೆಸ್ಕಾಂನವರು ಬಂದಿದ್ದು, ಸ್ಥಳೀಯರ ಸಹಾಕಾರದೊಂದಿಗೆ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಇದನ್ನೂ ಓದಿ: Gun ಹಿಡಿದು ರೈತರನ್ನು ಬೆದರಿಸಿದ ಪ್ರಕರಣ: ಪೂಜಾ ಖೇಡ್ಕರ್ ಪೋಷಕರ ವಿರುದ್ಧ FIR

Advertisement

Udayavani is now on Telegram. Click here to join our channel and stay updated with the latest news.

Next