ಕುಂದಾಪುರ: ರೈತರು ಭತ್ತದ ಬೆಳೆಯನ್ನು ಬೆಳೆಯುವಲ್ಲಿ ಹಲವು ರೀತಿಯ ಸಮಸ್ಯೆ ಎದುರಿಸುತ್ತಿದ್ದು ಕೂಲಿಯಾಳುಗಳ ಸಮಸ್ಯೆ ಅತ್ಯಂತ ಪ್ರಮುಖವಾಗಿದೆ.
ಅಧಿಕ ಖರ್ಚು- ಕಡಿಮೆ ಆದಾಯ, ಬೆಂಬಲ ಬೆಲೆ ಇಲ್ಲದಿ ರುವುದು ಇತ್ಯಾದಿ ಕಾರಣಗಳಿಂದ ಭತ್ತದ ಗದ್ದೆಯನ್ನು ಹಡಿಲು ಬಿಟ್ಟಿದ್ದಾರೆ.
ಪ್ರಸ್ತುತ ವರ್ಷ ಕೋವಿಡ್ -19 ಕಾರಣದಿಂದ ಉದ್ಯೋಗ ಇಲ್ಲದಿರುವ ಸಂದರ್ಭದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಧ.ಗ್ರಾ. ಯೋಜನೆ ಬಿ.ಸಿ. ಟ್ರಸ್ಟ್ನ ಕೃಷಿ ವಿಭಾಗದ ಮೂಲಕ ಯಂತ್ರಶ್ರೀ ಯೋಜನೆ ತಂದಿದ್ದು ಕುಂದಾಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ಹಡಿಲು ಭೂಮಿಗೆ ಹಸುರು ಸ್ಪರ್ಶ ನೀಡಲು ಮುಂದಾಗಿದ್ದಾರೆ.
ಸಾಂಕೇತಿಕವಾಗಿ ಕೋಟೇಶ್ವರ ವಲಯದ ಬೀಜಾಡಿಯ ರೈತರಾದ ಸತ್ಯನಾರಾಯಣ ಹೆಬ್ಟಾರ್ ಅವರು 5 ವರ್ಷಗಳಿಂದ ಹಡಿಲು ಬಿಟ್ಟಿದ್ದ 1 ಎಕರೆ ಭತ್ತದ ಗದ್ದೆಗೆ ಹಸುರು ಸ್ಪರ್ಶ ನೀಡಲಾಯಿತು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕ ನಾಗರಾಜ್, ಒಕ್ಕೂಟದ ಅಧ್ಯಕ್ಷೆ ಮಹಾಲಕ್ಷ್ಮೀ, ಚಾಲಕರಾದ ಅಶೋಕ್, ರತ್ನಾಕರ್, ಸದಸ್ಯೆ ಗೀತಾ ಹೆಬ್ಟಾರ್ ಉಪಸ್ಥಿತರಿದ್ದರು. ತಾಲೂಕು ಕೃಷಿ ಅಧಿಕಾರಿ ಚೇತನ್ ಕುಮಾರ್ ನಿರ್ವಹಿಸಿದರು. ಹಲವು ರೈತರು ಯಾಂತ್ರೀಕೃತ ಭತ್ತ ನಾಟಿಯನ್ನು ವೀಕ್ಷಿಸಿದರು.