Advertisement

ಮಮತಾ ಸರಕಾರದಿಂದ ದುರ್ಗಾಪೂಜೆಗೆ ಅನುದಾನ: ಸುಪ್ರೀಂ ನಲ್ಲಿ ಪ್ರಶ್ನೆ

12:11 PM Oct 11, 2018 | Team Udayavani |

ಹೊಸದಿಲ್ಲಿ : ದುರ್ಗಾ ಪೂಜೆ ಸಮಿತಿಗಳಿಗೆ ತಲಾ 10,000 ರೂ. ಅನುದಾನ ಮಂಜೂರು ಮಾಡಿರುವ ಪಶ್ಚಿಮ ಬಂಗಾಲ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ನಾಳೆ ಶುಕ್ರವಾರ ನಡೆಸಲು ಸುಪ್ರೀಂ ಕೋರ್ಟ್‌ ಇಂದು ಗುರುವಾರ ಒಪ್ಪಿಕೊಂಡಿದೆ. 

Advertisement

ಮಮತಾ ಬ್ಯಾನರ್ಜಿ ಸರಕಾರದ ಈ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಕಲ್ಕತ್ತ ಹೈಕೋರ್ಟ್‌ ನಿರಾಕರಿಸಿರುವ ಕಾರಣ, ಸುಪ್ರೀಂ ಕೋರ್ಟ್‌ ಮುಂದೆ ಈ ವಿಷಯವನ್ನು ತಾವು ತರುತ್ತಿದ್ದೇವೆ ಎಂದು ಅರ್ಜಿದಾರರು ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅವರಿಗೆ ಮನವರಿಕೆ ಮಾಡಿರುವ ಪ್ರಯುಕ್ತ ನಾಳೆ ಅರ್ಜಿ ವಿಚಾರಣೆಗೆ ಬರಲಿದೆ. 

ಮಮತಾ ಸರಕಾರದ ಈ ನಿರ್ಧಾರವು ಸ್ಥಾಪಿತ ಕಾನೂನಿನ ತತ್ವಕ್ಕೆ ವಿರುದ್ದವಾಗಿದೆ ಎಂದು ಆರೋಪಿಸಿ ವಕೀಲ ಸೌರವ್‌ ದತ್ತಾ ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next