Advertisement

ಚುನಾವಣಾ ಬಾಂಡ್‌ ಸ್ಕೀಮ್‌ : ಮಧ್ಯಂತರ ತಡೆ ಇಲ್ಲ, ಎ.10ರಂದು ವಿಚಾರಣೆ: ಸುಪ್ರೀಂ

08:59 AM Apr 06, 2019 | Sathish malya |

ಹೊಸದಿಲ್ಲಿ : ರಾಜಕೀಯ ಪಕ್ಷಗಳಿಗೆ ನಿಧಿ ಒದಗಿಸುವ ಉದ್ದೇಶದಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಚುನಾವಣಾ ಬಾಂಡ್‌ ಸ್ಕೀಮಿಗೆ ಮಧ್ಯಂತರ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

Advertisement

ಅರ್ಜಿದಾರ ಎನ್‌ ಜಿ ಓ ಈ ಬಗ್ಗೆ ಸಮರ್ಪಕ ರೀತಿಯಲ್ಲಿ ಅರ್ಜಿ ಸಲ್ಲಿಸತಕ್ಕದ್ದು ಎಂದು ಅದು ಸೂಚಿಸಿದೆ.

ರಾಜಕೀಯ ಪಕ್ಷಗಳ ನಿಧಿಗೆ ಕಪ್ಪು ಹಣ ಹರಿದು ಬರುವುದನ್ನು ತಡೆಯುವ ಉದ್ದೇಶದಿಂದ ತಾನು ಚುನಾವಣಾ ಬಾಂಡ್‌ ಸ್ಕೀಮನ್ನು ಜಾರಿಗೆ ತಂದಿದ್ದುದಾಗಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ.

ಈ ಬಗ್ಗೆ ಕೂಲಂಕಷ ಮತ್ತು ವಿಸ್ತೃತ ವಿಚಾರಣೆ ನಡೆಸಬೇಕಾಗಿರುವುದರಿಂದ ತಾನು ಎನ್‌ಜಿಓ ಅರ್ಜಿಯನ್ನು ಎ.10ರಂದು ವಿಚಾರಣೆಗೆ ಎತ್ತಿಕೊಳ್ಳುವುದಾಗಿ ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ಪೀಠ ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next