Advertisement

ಬಿಜೆಪಿ ನಾಯಕನಿಂದ ಬೊಫೋರ್ಸ್ ಮೇಲ್ಮನವಿ: ಸುಪ್ರೀಂ ಪ್ರಶ್ನೆ

05:09 PM Jan 16, 2018 | udayavani editorial |

ಹೊಸದಿಲ್ಲಿ : ರಾಜಕೀಯ ಸೂಕ್ಷ್ಮ ಸಂವೇದಿಯಾಗಿರುವ 64 ಕೋಟಿ ರೂ.ಗಳ ಬೊಫೋರ್ಸ್  ಲಂಚ ಹಗರಣದಲ್ಲಿ ಮೇಲ್ಮನವಿ ಸಲ್ಲಿಸಿರುವ ಬಿಜೆಪಿ ನಾಯಕ ಅಜಯ್‌ ಅಗ್ರವಾಲ್‌ ಅವರಿಗೆ ಸುಪ್ರೀಂ ಕೋರ್ಟ್‌ ಇಂದು ಮಂಗಳವಾರ, “ಈ ವಿಷಯದಲ್ಲಿ ಕೋರ್ಟ್‌ ಮೆಟ್ಟಲೇರುವುದಕ್ಕೆ ನಿಮಗಿರುವ ಹಕ್ಕೇನು ಎಂಬ ಬಗ್ಗೆ ವಿವರಣೆ ನೀಡಿ’ ಎಂದು ಆದೇಶಿಸಿದೆ. 

Advertisement

2005ರ ಮೇ 31ರಂದು ದಿಲ್ಲಿ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಿಬಿಐ ಯಾವುದೇ ಮೇಲ್ಮನವಿ ಸಲ್ಲಿಸಿಲ್ಲ; ಹಾಗಿರುವಾಗ ನೀವೀಗ ಮೇಲ್ಮನವಿ ಸಲ್ಲಿಸಿರುವುದಕ್ಕೆ ನಿಮಗಿರುವ ಹಕ್ಕೇನು ಎಂದು ಸುಪ್ರೀಂ ಕೋರ್ಟ್‌ ವರಿಷ್ಠ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠವು ಅಜಯ್‌ ಅಗ್ರವಾಲ್‌ಗೆ ಪ್ರಶ್ನಿಸಿತು. 

ಈ ವಿಷಯವನ್ನು ಸರ್ವೋಚ್ಚ ನ್ಯಾಯಾಲಯ ಈಗಿನ್ನು ಫೆಬ್ರವರಿ 2ರಂದು ವಿಚಾರಣೆಗೆ ಎತ್ತಿಕೊಳ್ಳಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next