Advertisement

ಹಾಜಿ ಅಲಿ ದರ್ಗಾ ಅತಿಕ್ರಮಣ ತೆರವಿಗೆ ಸುಪ್ರೀಂನಿಂದ 2 ವಾರ ಗಡುವು

06:00 PM Jul 03, 2017 | udayavani editorial |

ಮುಂಬಯಿ : ದಕ್ಷಿಣ ಮುಂಬಯಿಯಲ್ಲಿನ ಐತಿಹಾಸಿಕ ಹಾಜಿ ಅಲಿ ದರ್ಗಾ ಸುತ್ತಮುತ್ತಲ 908 ಚದರ್‌ ಮೀಟರ್‌ ಪ್ರದೇಶದಲ್ಲಿನ ಅತಿಕ್ರಮಗಳನ್ನು ಎರಡು ವಾರಗಳ ಒಳಗೆ ತೆರವುಗೊಳಿಸದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಸುಪ್ರೀಂ ಕೋರ್ಟ್‌ ಮಹಾರಾಷ್ಟ್ರ ಸರಕಾರಕ್ಕೆ ಅಂತಿಮ ಎಚ್ಚರಿಕೆ ನೀಡಿದೆ. 

Advertisement

ವರಿಷ್ಠ ನ್ಯಾಯಮೂತಿರ ಜೆ ಎಸ್‌ ಖೇಹರ್‌ ಮತ್ತು ಜಸ್ಟಿಸ್‌ ಡಿ ವೈ ಚಂದ್ರಚೂಡ್‌ ಅವರನ್ನು ಒಳಗೊಂಡ ಪೀಠವು ಮಹಾರಾಷ್ಟ್ರ ಸರಕಾರಕ್ಕೆ “ಸವೋಚ್ಚ ನ್ಯಾಯಾಲಯದ ಈ ಆದೇಶಕ್ಕೆ ಅನುಗುಣವಾಗಿ ಎರಡು ವಾರಗಳ ಒಳಗೆ ದರ್ಗಾ ಸುತ್ತಮುತ್ತಲಿನ 908 ಚ.ಮೀ. ಪ್ರದೇಶದೊಳಗಿನ ಅತಿಕ್ರಮಗಳನ್ನು ತೆರವುಗೊಳಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು’ ಎಂದು ಎಚ್ಚರಿಕೆ ನೀಡಿತಲ್ಲದೆ ಮುಂದಿನ ವಿಚಾರಣೆಯ ದಿನದಂದು ನ್ಯಾಯಾಲಯದಲ್ಲಿ ಹಾಜರಿರುವಂತೆ ಕೊಲಾಬಾ ವಲಯದ ಡೆಪ್ಯುಟಿ ಕಲೆಕ್ಟರ್‌ಗೆ ಆದೇಶ ನೀಡಿತು. 

“ಈ ನ್ಯಾಯ ಪೀಠದ ಆದೇಶ ಜಾರಿಯಾಗದಿದ್ದರೆ ನೀವು ವೈಯಕ್ತಿಕವಾಗಿ ಜವಾಬ್ದಾರರಾಗಿರುತ್ತೀರಿ’ ಎಂದು ಕೋರ್ಟ್‌ ಕೊಲಾಬಾ ಡಿಸಿ ಗೆ ಎಚ್ಚರಿಕೆ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next