Advertisement

ಆ.23ರಂದು ಸಿಬಿಐ ವಿಚಾರಣೆಗೆ ಹಾಜರಾಗಿ: ಕಾರ್ತಿಗೆ ಸುಪ್ರೀಂ ಆದೇಶ

03:40 PM Aug 18, 2017 | Team Udayavani |

ಹೊಸದಿಲ್ಲಿ : ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೇ ಆಗಸ್ಟ್‌ 23ರಂದು ವಿಚಾರಣೆಗಾಗಿ ಸಿಬಿಐ ಪ್ರಧಾನ ಕಾರ್ಯಾಲಯದಲ್ಲಿ ಹಾಜರಾಗುವಂತೆ ಸುಪ್ರೀಂ ಕೋರ್ಟ್‌ ಕಾರ್ತಿ ಚಿದಂಬರಂ ಗೆ ಸೂಚಿಸಿದೆ.

Advertisement

ಸಿಬಿಐ ಕಾರ್ಯಾಲಯದಲ್ಲಿ ಹಾಜರಾಗುವಾಗ ತಮ್ಮ ವಕೀಲರನ್ನು ತಮ್ಮ ಜತೆಗೆ ಒಯ್ಯುವುದಕ್ಕೆ ಕಾರ್ತಿ ಚಿದಂಬರಂ ಗೆ ವರಿಷ್ಠ ನ್ಯಾಯಮೂರ್ತಿ ಜಗದೀಶ್‌ ಸಿಂಗ್‌ ಖೇಹರ್‌ ಮತ್ತು ಜಸ್ಟಿಸ್‌ ಡಿ ವೈ ಚಂದ್ರಚೂಡ್‌ ಅವರನ್ನು ಒಳಗೊಂಡ ಪೀಠ ಅನುಮತಿ ನೀಡಿದೆ.

ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಆ.28ಕೆ ನಿಗದಿಸಿದೆ. 

ಮಾಜಿ ಕೇಂದ್ರ ವಿತ್ತ ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ವಿದೇಶಕ್ಕೆ ಹೋಗುವುದಕ್ಕೆ ಅವಕಾಶ ನೀಡಿದ್ದ ಮದ್ರಾಸ್‌ ಹೈಕೋರ್ಟ್‌ ನ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಕಳೆದ ಆ.14ರಂದು ತಡೆ ನೀಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next