Advertisement

ಲೋಕಾಯುಕ್ತ ನೇಮಿಸಿಲ್ಲ ಏಕೆ: 12 ರಾಜ್ಯಗಳಿಗೆ ಸುಪ್ರೀಂ ನೊಟೀಸ್‌

12:08 PM Mar 23, 2018 | udayavani editorial |

ಹೊಸದಿಲ್ಲಿ : ಲೋಕಾಯುಕ್ತ ನೇಮಕ ಏಕೆ ಮಾಡಿಲ್ಲ ಎಂದು 12 ರಾಜ್ಯಗಳ ಮುಖ್ಯಕಾರ್ಯದರ್ಶಿಗಳಿಗೆ ಎರಡು ವಾರಗಳ ಒಳಗೆ ಉತ್ತರಿಸುವಂತೆ ಸುಪ್ರೀಂ ಕೋರ್ಟ್‌ ನೊಟೀಸ್‌ ಜಾರಿ ಮಾಡಿದೆ. 

Advertisement

ನ್ಯಾಯಮೂರ್ತಿಗಳಾದ ರಂಜನ್‌ ಗೊಗೋಯ್‌ ಮತ್ತು ಆರ್‌ ಭಾನುಮತಿ ಅವರನ್ನು ಒಳಗೊಂಡ ಪೀಠವು  ಒಡಿಶಾ ಮುಖ್ಯ ಕಾರ್ಯದರ್ಶಿಗಳಿಗೆ ಲೋಕಾಯುಕ್ತ ಬಗ್ಗೆ ಮಾಹಿತಿ ನೀಡುವಂತೆ ಆದೇಶಿಸಿತು. ಒಡಿಶಾದಲ್ಲಿ  ಭ್ರಷ್ಟಾಚಾರ ನಿಗ್ರಹ ಓಂಬುಡ್ಸ್‌ಮನ್‌ ಇದ್ದಾರೋ ಇಲ್ಲವೋ ಎಂಬ ಬಗ್ಗೆ ನಮಗೇನೂ ಮಾಹಿತಿ ಇಲ್ಲ ಎಂದು ಪೀಠ ಹೇಳಿತು.

ಲೋಕಾಯುಕ್ತ ನೇಮಕಾತಿ ಏಕೆ ಮಾಡಿಲ್ಲ ಎಂದು 2 ವಾರಗಳ ಒಳಗೆ ಉತ್ತರಿಸಬೇಕಾದ ರಾಜ್ಯಗಳೆಂದರೆ ಜಮ್ಮು ಕಾಶ್ಮೀರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್‌, ಪುದುಚೇರಿ, ತಮಿಳು ನಾಡು, ತೆಲಂಗಾಣ, ತ್ರಿಪುರ, ಅರುಣಾಚಲ ಪ್ರದೇಶ, ದಿಲ್ಲಿ ಮತ್ತು ಪಶ್ಚಿಮ ಬಂಗಾಲ.

Advertisement

Udayavani is now on Telegram. Click here to join our channel and stay updated with the latest news.

Next