Advertisement

ನಿಮ್ಮ ಫೋನನ್ನು ನಮಗೊಪ್ಪಿಸಿ; ಸುಪ್ರೀಂಕೋರ್ಟ್‌ ನೇಮಿಸಿದ ತಾಂತ್ರಿಕ ಸಮಿತಿ ಸೂಚನೆ

08:36 PM Jan 02, 2022 | Team Udayavani |

ನವದೆಹಲಿ: “ಪೆಗಾಸಸ್‌ ಗೂಢಚರ್ಯೆಗೆ ಒಳಗಾದವರು ನಮಗೆ ವಿವರ ನೀಡಿ. ಜತೆಗೆ ನಿಮ್ಮ ಮೊಬೈಲ್‌ಗ‌ಳನ್ನೂ ನಮಗೆ ಒಪ್ಪಿಸಿ’ ಹೀಗೆಂದು ವಿವಾದಾತ್ಮಕ ಗೂಢಚರ್ಯೆ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಚ್‌ ನೇಮಕ ಮಾಡಿದ ತಾಂತ್ರಿಕ ಸಮಿತಿ ರಾಜಕೀಯ ವ್ಯಕ್ತಿಗಳು, ಹೋರಾಟಗಾರರು, ಪತ್ರಕರ್ತರಿಗೆ ಸೂಚನೆ ನೀಡಿದೆ.

Advertisement

ಪೆಗಾಸಸ್‌ ಗೂಢಚರ್ಯೆಯಿಂದ ಆಘಾತಕ್ಕೆ ಈಡಾದವರು ಜ.7ರ ಒಳಗಾಗಿ ಸಮಿತಿಗೆ ವಿವರಗಳನ್ನು ಸಲ್ಲಿಕೆ ಮಾಡಬಹುದಾಗಿದೆ ಎಂದು ಸಾರ್ವಜನಿಕವಾಗಿ ಪ್ರಕಟಣೆ ನೀಡಿದೆ.

ಇದನ್ನೂ ಓದಿ:ನಾಗಮಂಗಲ: ಬಸ್ ಢಿಕ್ಕಿ; ಕಾರಿನಲ್ಲಿದ್ದ ನವ ದಂಪತಿ ಸೇರಿ, ಮೂವರು ದಾರುಣ ಸಾವು

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, ಚುನಾವಣಾ ವ್ಯೂಹರಚನೆಕಾರ ಪ್ರಶಾಂತ್‌ ಕಿಶೋರ್‌ ಸೇರಿದಂತೆ 142ಕ್ಕೂ ಅಧಿಕ ಮಂದಿಯ ಮೇಲೆ ನಿಗಾ ಇರಿಸಲಾಗಿತ್ತು ಎಂಬ ವಿಚಾರ ಕೋಲಾಹಲಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ದಾವೆಯನ್ನೂ ಹೂಡಲಾಗಿತ್ತು. ಅದರ ಬಗ್ಗೆ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ ತನಿಖೆಗಾಗಿ ತಾಂತ್ರಿಕ ಸಮಿತಿಯನ್ನು ರಚನೆ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next