Advertisement

ಧೋನಿ ಕ್ರಿಕೆಟಿಗೆ ಗುಡ್‌ಬೈ ಹೇಳಿದರೆ ಧರಣಿ ಮಾಡ್ತಿದ್ದೆ: ಗಾವಸ್ಕರ್‌!

03:45 AM Jan 06, 2017 | |

ನವದೆಹಲಿ: ಏಕದಿನ ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ ಎಂ.ಎಸ್‌. ಧೋನಿ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ನಾಯಕ ಸುನೀಲ್‌ ಗಾವಸ್ಕರ್‌, “ಸದ್ಯ ಅವರು ನಾಯಕತ್ವಕ್ಕಷ್ಟೇ ಗುಡ್‌ಬೈ ಹೇಳಿದ್ದಾರೆ. ಒಂದು ವೇಳೆ ಅವರೇನಾದರೂ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಲ್ಲಿ, ನಾನು ಅವರ ಮನೆ ಮುಂದೆ ಧರಣಿ ಮಾಡಿ, ತಂಡಕ್ಕೆ ಮರಳುವಂತೆ ಒತ್ತಾಯಿಸುತ್ತಿದ್ದೆ’ ಎಂದು ಹೇಳಿದ್ದಾರೆ.

Advertisement

“ಧೋನಿ ಅವರಲ್ಲಿ ಇನ್ನೂ ಸಾಕಷ್ಟು ಉತ್ತಮ ಆಟ ಉಳಿದಿದೆ. ಈಗಲೂ ಅವರು ಯಾವುದೇ ಹಂತದಲ್ಲಿ ಪಂದ್ಯದ ಗತಿಯನ್ನು ಬದಲಾಯಿಸುವ ಶಕ್ತಿ ಹೊಂದಿದ್ದಾರೆ. ಭಾರತ ತಂಡಕ್ಕೆ ಅವರ ಅಗತ್ಯ ಇದೆ. ಇನ್ನಷ್ಟು ವರ್ಷಗಳ ಕಾಲ ಅವರು ತಂಡದಲ್ಲಿ ನಿಶ್ಚಿಂತೆಯಿಂದ ಆಡಬಹುದು…’ ಎಂದು ಗಾವಸ್ಕರ್‌ ಹೇಳಿದ್ದಾರೆ. ನಾಯಕತ್ವ ಬಿಟ್ಟಿರುವುದರಿಂದ ಧೋನಿ ಇನ್ನಷ್ಟು ನಿಶ್ಚಿಂತೆಯಿಂದ ವಿಕೆಟ್‌ ಕೀಪಿಂಗ್‌ ಮಾಡಬಹುದು ಮತ್ತು ಬ್ಯಾಟ್‌ ಬೀಸಬಹುದು ಎಂದು ಸನ್ನಿ ವಿಶ್ಲೇಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next