Advertisement

ಕೊಡಲಿ ಮಾಫಿಯಾದಿಂದ ಮರ ಉಳಿಸಿ

11:41 AM Jan 12, 2018 | |

ಮಹದೇವಪುರ: ಕೆಲ ತಿಂಗಳ ಹಿಂದೆ ಹೊರವರ್ತುಲ ರಸ್ತೆಯ ಮಾರತ್ತಹಳ್ಳಿ ಸಮೀಪ ಜಾಹಿರಾತು ಫ‌ಲಕಗಳಿಗೆ ಅಡ್ಡಲಾಗಿವೆ ಎಂಬ ಕಾರಣಕ್ಕೆ ಜಾಹಿರಾತು ಮಾಫಿಯಾದವರು ಕಡಿದಿದ್ದ ಮರಗಳು ಮತ್ತೂಮ್ಮೆ ಚಿಗುರಿದ್ದು, ಈಬಾರಿಯಾದರೂ ಅವುಗಳನ್ನು ಉಳಿಸುವಂತೆ ಪರಿಸರ ಪ್ರೇಮಿಗಳು ಪಾಲಿಕೆಗೆ ಆಗ್ರಹಿಸಿದ್ದಾರೆ.

Advertisement

ಔಟರ್‌ ರಿಂಗ್‌ ರಸ್ತೆಯ ಮಾರತ್‌ಹಳ್ಳಿ ರಸ್ತೆ ವಿಭಜಕದಲ್ಲಿ ಬೆಳೆಸಲಾಗಿದ್ದ ಮರಗಳು ಜಾಹಿರಾತು ಫ‌ಲಕಗಳಿಗೆ ಅಡ್ಡಲಾಗಿವೆ ಎಂದು, ಎರಡು ತಿಂಗಳ ಹಿಂದೆ ಜಾಹಿರಾತು ಮಾಫಿಯಾದವರು ರಾತ್ರೋರಾತ್ರಿ 30 ಮರಗಳನ್ನು ಕತ್ತರಿಸಿ ಹಾಕಿದ್ದರು.

ಇದನ್ನು ತೀವ್ರವಾಗಿ ಖಂಡಿಸಿದ್ದ ಪರಿಸರ ಪ್ರೇಮಿಗಳು, ಮರಗಳನ್ನು ಅಪ್ಪಿಕೊಂಡು ಪ್ರತಿಭಟಿಸಿದ್ದರು. ವೃಕ್ಷ ಪ್ರೇಮಿ ವಿಜಯ್‌ ನಿಶಾಂತ್‌, ಸತತ ಎರಡು ತಿಂಗಳ ಕಾಲ ಮರಗಳಿಗೆ ಔಷಧೋಪಚಾರ ಮಾಡಿದ್ದರಿಂದ ಬಹುತೇಕ ಮರಗಳು ಮತ್ತೆ ಚಿಗುರೊಡೆದಿವೆ.

ಸೊಂಪಾಗಿ ಬೆಳೆದು ನಿಂತಿರುವ ಮರಗಳನ್ನು, ಮರಗಳ ಕೊಂಬೆಗಳನ್ನು ಕಡಿಯುವ, ಬೇರುಗಳಿಗೆ ವಿಷ, ಆ್ಯಸಿಡ್‌ ಹಾಕುವ ದುಷ್ಕೃತ್ಯ ಎಸಗುವ ದುಷ್ಕರ್ಮಿಗಳಿಗೆ ಇದುವರೆಗೂ ಯಾವುದೇ ಶಿಕ್ಷೆಯಾಗಿಲ್ಲ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಕೂಡಲೆ ಜಾಗೃತರಾಗಿ ಕ್ರಮಕ್ಕೆ ಮುಂದಾಗಬೇಕು ಎಂದು ಪರಿಸರ ಮಂಜುನಾಥ್‌ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next