Advertisement

“ಮಣ್ಣು ಉಳಿಸಿ’ಅಭಿಯಾನ: ಇಂದು ಪ್ರಾಗ್‌ನಲ್ಲಿ ಸದ್ಗುರು ಅಭಿಯಾನ

01:01 AM Mar 26, 2022 | Team Udayavani |

ಪ್ರಾಗ್‌: ಈಶ ಫೌಂಡೇಶನ್‌ನ ಸಂಸ್ಥಾಪಕರಾಗಿರುವ ಸದ್ಗರು ಜಗ್ಗಿ ವಾಸುದೇವ ಅವರು “ಮಣ್ಣು ಉಳಿಸಿ’ ಅಭಿಯಾನದ ಭಾಗವಾಗಿ ಮಾ.26ರಂದು ಜೆಕ್‌ ರಿಪಬ್ಲಿಕ್‌ನ ರಾಜಧಾನಿ ಪ್ರಾಗ್‌ ತಲುಪಲಿದ್ದಾರೆ.

Advertisement

ಮಾ. 24 ರಂದು ಜರ್ಮನಿ ರಾಜಧಾನಿ ಬರ್ಲಿನ್‌ನಲ್ಲಿ ಹಲವು ಕಾರ್ಯ ಕ್ರಮಗಳಲ್ಲಿ ಭಾಗವಹಿಸಿದ್ದ ಅವರು ಅಲ್ಲಿಂದ ನೇರವಾಗಿ ಪ್ರಾಗ್‌ಗೆ ಬಂದಿದ್ದಾರೆ. ಅದರ ಮಧ್ಯೆ ವಿಶ್ವಸಂಸ್ಥೆಯ ಮರುಭೂಮಿ ಎದುರಿಸುವ ಸಮಾವೇಶ (ಯುಎನ್‌ಸಿಸಿಡಿ)ದ ಅಧಿಕಾರಿಗಳನ್ನೂ ಭೇಟಿ ಮಾಡಿದ್ದಾರೆ.

ಇದನ್ನೂ ಓದಿ:ಯಾವ ಸ್ವಾಮೀಜಿಗಳ ಬಗ್ಗೆಯೂ ನಾನು ಅಗೌರವದಿಂದ ಮಾತನಾಡಿಲ್ಲ : ಸಿದ್ದು

ಪ್ರಾಗ್‌ನ ಟಾಪ್‌ ಹೊಟೇಲ್‌ ಕಾಂಗ್ರೆಸ್‌ ಸೆಂಟರ್‌ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಜನರಿಗೆ ಮಣ್ಣು ಉಳಿಸುವ ಬಗ್ಗೆ ಅರಿವು ಮೂಡಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next