Advertisement

28 ರಿಂದ ಜಿಲ್ಲಾ ಮಟ್ಟದ ಅರಣ್ಯವಾಸಿಗಳ ಉಳಿಸಿ- ‘ಜಾಥಾ’

03:00 PM Feb 25, 2022 | Team Udayavani |

ಶಿರಸಿ: ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿ ಜಾಗೃತಿ ಮೂಡಿಸುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲಾದ್ಯಂತ ಸಾವಿರ ಕೀ.ಮೀ ಕ್ರಮಿಸಿ 500 ಹಳ್ಳಿಗಳಿಗೆ ಅರಣ್ಯವಾಸಿಗಳ ಮನೆ ಮನೆಗೆ ಭೇಟಿ ನೀಡುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಅರಣ್ಯವಾಸಿಗಳನ್ನು ಉಳಿಸಿ- ‘ಜಾಥಾ’ ಕಾರ್ಯಕ್ರಮವನ್ನು ಕುಮಟ ತಾಲೂಕಿನಲ್ಲಿ ಫೆ.28 ರಂದು ಜಿಲ್ಲಾದ್ಯಂತ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

Advertisement

ಅವರು ಶುಕ್ರವಾರ ಶಿರಸಿಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಅತೀಕ್ರಮಣದಾರರನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲಾದ್ಯಂತ ಸಂಚರಿಸುವ ಜಾಥದಲ್ಲಿ ವಿಶೇಷ ರೀತಿಯಲ್ಲಿ ಅಲಂಕರಿಸಿದ ಜಾಥ ವಾಹನದ ಮೂಲಕ ಮೂವತ್ತು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ ಎಂದ ಅವರು ಅತೀ ಶೀಘ್ರದಲ್ಲಿ ಸುಪ್ರೀಂ ಕೋರ್ಟ್‍ನಲ್ಲಿ ರಾಜ್ಯ ಸರಕಾರವು ಅಫೀಡಾವಿಟ್ ಸಲ್ಲಿಸುವಂತೆ ಈ ಸಂದರ್ಭದಲ್ಲಿ ಅಗ್ರಹಿಸಲಾಗುವುದು ಎಂದು ಹೇಳಿದರು.

ಜಾಥ ಸಂದರ್ಭದಲ್ಲಿ ಅರಣ್ಯ ಹಕ್ಕು ಕಾಯಿದೆ ಸಂಬಂಧಪಟ್ಟಂತ ಕಾಯಿದೆ ಅಂಶ ಹಾಗೂ ಜಿಪಿಎಸ್ ಆಗದಿದ್ದಲ್ಲಿ, ಜಿಪಿಎಸ್ ಆಗಿ ಕಡಿಮೆ ಆದ್ದಲ್ಲಿ ಮುಂತಾದ ಮೇಲ್ಮನವಿ ಕುರಿತು ಉಚಿತವಾಗಿ ಮೇಲ್ಮನವಿ ಅರ್ಜಿ ವಿತರಿಸಲಾಗುವುದು ಎಂದು ರವೀಂದ್ರ ನಾಯ್ಕ ತಿಳಿಸಿದರು.

ಸಭೆಯಲ್ಲಿ ತಾಲೂಕು ಅಧ್ಯಕ್ಷ ಲಕ್ಷ್ಮಣ ಮಾಳ್ಳಕ್ಕನವರ, ರಾಜೇಶ್ ನೇತ್ರೇಕರ, ಎಮ್ ಆರ್ ನಾಯ್ಕ ಕಂಡ್ರಾಂಜಿ, ನೆಹರೂ ನಾಯ್ಕ, ಇಬ್ರಾಹಿಂ ಗೌಡಳ್ಳಿ, ಮಲ್ಲೇಶಿ ಸಂತೋಳ್ಳಿ, ಚಂದ್ರು ನಾಯ್ಕ, ಕಲ್ಲಪ್ಪ ಸಂತೋಳ್ಳಿ, ಎಮ್ ಕೆ ನಾಯ್ಕ, ಅರವಿಂದ ಗೌಡ, ದೇವರಾಯ ನಾಯಕ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next