Advertisement

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

12:08 AM Apr 28, 2024 | Team Udayavani |

ಹೊಸದಿಲ್ಲಿ: “ದಯವಿಟ್ಟು ಬೌಲರ್‌ ಗಳನ್ನು ಯಾರಾದರೂ ಕಾಪಾಡಿ, ಪ್ಲೀಸ್‌…’ ಎಂದು ವಿನಂತಿಸಿಕೊಂಡಿದ್ದಾರೆ ಸೀನಿಯರ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿ‌ನ್‌!

Advertisement

ಶುಕ್ರವಾರ ರಾತ್ರಿ “ಈಡನ್‌ ಗಾರ್ಡನ್‌’ನಲ್ಲಿ ಕೆಕೆಆರ್‌ ನೀಡಿದ 262 ರನ್‌ ಸವಾಲನ್ನು ಪಂಜಾಬ್‌ ಕೇವಲ 2 ವಿಕೆಟ್‌ ನಷ್ಟದಲ್ಲಿ ಬೆನ್ನಟ್ಟಿ ಗೆದ್ದ ಬಳಿಕ ಅಶ್ವಿ‌ನ್‌ “ಎಕ್ಸ್‌’ನಲ್ಲಿ ಇಂಥದೊಂದು ಪೋಸ್ಟ್‌ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಆದರೆ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ಅವರದು ಇದಕ್ಕೆ ತದ್ವಿರುದ್ಧ ಪ್ರತಿಕ್ರಿಯೆ. “ಇದನ್ನು ಐತಿಹಾಸಿಕ ಎಂದೇ ಹೇಳಬೇಕಾಗುತ್ತದೆ. 8 ಎಸೆತ ಮತ್ತು 8 ವಿಕೆಟ್‌ ಬಾಕಿ ಉಳಿದಿರುವಂತೆಯೇ 262 ರನ್‌ ಬೆನ್ನಟ್ಟಲಾಗಿದೆ. ಬ್ಯಾಟರ್‌ಗಳು ತಮ್ಮ ನೈಜ ಸಾಮರ್ಥ್ಯವನ್ನು ಅನ್‌ಲಾಕ್‌ ಮಾಡಿದ್ದಾರೆ. ಬ್ಯಾಟರ್‌ಗಳಿಗಿಂತ ಮಿಗಿಲಾದ ಪ್ರದರ್ಶನ ನೀಡಲು ಬೌಲರ್‌ಗಳಿಗೆ ಹೇಳಿಕೊಡಬೇಕಿದೆ. ಐಪಿಎಲ್‌ ವಿಕಸನಗೊಳ್ಳುತ್ತಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next