Advertisement

ವಿಜಯಪುರ : 71 ಗೋವುಗಳ ರಕ್ಷಣೆ

09:27 PM Jul 21, 2021 | Girisha |

ವಿಜಯಪುರ: ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪಾಲಿಕೆ ಅ ಧಿಕಾರಿಗಳ ನೇತೃತ್ವದ ತಂಡ ಇಟ್ಟಂಗಿಹಾಳ ಗ್ರಾಮದಲ್ಲಿ ಮಂಗಳವಾರ 71 ಆಕಳು, ಆಕಳು ಕರುಗಳನ್ನು ರಕ್ಷಿಸಿದೆ.

Advertisement

ಅಲ್ಲದೇ ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಕ್ರಮವಾಗಿ ಗೋವುಗಳನ್ನು ಸಾಗಿಸುವ ಕುರಿತು ಖಚಿತ ಮಾಹಿತಿ ಪಡೆದ ವಿವಿಧ ಇಲಾಖೆ ಅಧಿ ಕಾರಿಗಳ ತಂಡ ಜಿಲ್ಲಾ ಧಿಕಾರಿ ಪಿ.ಸುನೀಲಕುಮಾರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ್ದರು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಪೊಲೀಸ್‌ ಇಲಾಖೆ ಅ ಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಆಕಳುಗಳನ್ನು ರಕ್ಷಣೆ ಮಾಡಿದ್ದಾರೆ. ರಕ್ಷಣೆ ಮಾಡಿದ ಎಲ್ಲ ಗೋವು-ಕರುಗಳನ್ನು ವಿಜಯಪುರದ ತಾಲೂಕಿನ ಕಗ್ಗೊàಡ ಗೋಶಾಲೆಗೆ ಸಾಗಿಸಲಾಗಿದೆ.

ಈ ಸಂದರ್ಭದಲ್ಲಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಪ್ರಾಣೇಶ ಜಹಗೀರದಾರ, ಸಹಾಯಕ ನಿರ್ದೇಶಕ ಎಂ.ಸಿ. ಅರಕೇರಿ, ಡಾ| ಉಮೇಶ ನಾಲಾ, ಡಾ| ಪ್ರಕಾಶ ಗೂಳಪ್ಪಗೋಳ, ಆನಂದ ದೇವರನಾವದಗಿ ಸೇರಿದಂತೆ ಇತರರು ಗೋವುಗಳ ರಕ್ಷಣೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next