Advertisement

Savanur: ಗೌರಿ ಹೊಳೆಗೆ ತ್ಯಾಜ್ಯ ಸುರಿದ ವ್ಯಕ್ತಿಗೆ 3 ಸಾವಿರ ದಂಡ ವಿಧಿಸಿದ ಸವಣೂರು ಗ್ರಾ.ಪಂ

02:12 PM Aug 28, 2023 | Team Udayavani |

ಸವಣೂರು: ಪಾಲ್ತಾಡಿ ಗ್ರಾಮದ ನಾಡೋಳಿ ಗೌರಿ ಹೊಳೆಗೆ ತ್ಯಾಜ್ಯ ಸುರಿದ ವ್ಯಕ್ತಿಗೆ ಸವಣೂರು ಗ್ರಾ.ಪಂ. ದಂಡ ವಿಧಿಸಿದ ಬಗ್ಗೆ ವರದಿಯಾಗಿದೆ.

Advertisement

ವ್ಯಕ್ತಿಯೊಬ್ಬರು ಹೊಳೆಗೆ ತ್ಯಾಜ್ಯ ಸುರಿಯುತ್ತಿರುವುದನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ವಿಡಿಯೋ ಮಾಡಿ ಗ್ರಾ.ಪಂ. ಗಮನಕ್ಕೆ ತಂದಿದ್ದು, ವಾಹನದ ಗುರುತು ಪತ್ತೆಗೆ ಬೆಳ್ಳಾರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು.

ಅದರಂತೆ ಪೊಲೀಸ್ ಇಲಾಖೆ ನೀಡಿದ ಮಾಹಿತಿಯಂತೆ ತ್ಯಾಜ್ಯ ಸುರಿದ ವ್ಯಕ್ತಿಯನ್ನು ಸಂಪರ್ಕಿಸಿ ಗ್ರಾ.ಪಂ.ಗೆ ಬರುವಂತೆ ಸೂಚಿಸಲಾಗಿತ್ತು. ಗ್ರಾ.ಪಂ.ಗೆ ಬಂದ ವ್ಯಕ್ತಿಗೆ ಗ್ರಾ.ಪಂ. ತಿಳುವಳಿಕೆ ನೀಡಿ ತ್ಯಾಜ್ಯ ಸುರಿದಕ್ಕಾಗಿ 3 ಸಾವಿರ ದಂಡ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next