Advertisement

ಸತ್ಯಪ್ರಕಾಶ್‌ ಚಿತ್ರಕ್ಕೆ ಟೈಟಲ್‌ ಸಿಕ್ತು…

11:34 AM Jan 20, 2018 | |

“ರಾಮಾ ರಾಮಾ ರೇ’ ಚಿತ್ರದ ನಂತರ ನಿರ್ದೇಶಕ ಡಿ.ಸತ್ಯಪ್ರಕಾಶ್‌ “ಹೆಬ್ಬುಲಿ’ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಉಮಾಪತಿಯವರಿಗೆ ಸಿನಿಮಾ ಮಾಡಲಿದ್ದು, ಚಿತ್ರದ ಪ್ರಮುಖ ಪಾತ್ರಕ್ಕಾಗಿ ಶಾಲಾ ಹುಡುಗನೊಬ್ಬನ ಹುಡುಕಾಟ ಮಾಡುತ್ತಿದ್ದಾರೆಂಬ ಸುದ್ದಿಯನ್ನು ನೀವು ಓದಿರುತ್ತೀರಿ. ಆಗ ಆ ಸಿನಿಮಾಕ್ಕೆ ಟೈಟಲ್‌ ಆಗಿರಲಿಲ್ಲ.

Advertisement

ಈಗ ಚಿತ್ರಕ್ಕೆ ಶೀರ್ಷಿಕೆ ಅಂತಿಮವಾಗಿದೆ. ಅದು “ಒಂದಲ್ಲಾ ಎರಡಲ್ಲಾ’. ಹೌದು, ತಮ್ಮ ನಿರ್ದೇಶನದ ಎರಡನೇ ಸಿನಿಮಾಕ್ಕೆ “ಒಂದಲ್ಲಾ ಎರಡಲ್ಲಾ’ ಎಂಬ ಟೈಟಲ್‌ ಇಟ್ಟಿದ್ದಾರೆ. ಕಥೆಗೆ ಈ ಶೀರ್ಷಿಕೆ ಹೆಚ್ಚು ಸೂಕ್ತ ಎನಿಸಿದ ಕಾರಣ ಆ ಶೀರ್ಷಿಕೆಯನ್ನೇ ಚಿತ್ರತಂಡ ಅಂತಿಮಗೊಳಿಸಿದೆ. ಚಿತ್ರೀಕರಣ ಈ ತಿಂಗಳಾಂತ್ಯದಿಂದ ಆರಂಭವಾಗಲಿದೆ.

ಚಿತ್ರದ ಮುಖ್ಯಪಾತ್ರಧಾರಿ 8 ರಿಂದ 10 ವರ್ಷದ ಹುಡುಗನಾಗಿರಬೇಕಾಗಿದ್ದರಿಂದ, ಚಿತ್ರತಂಡ ಆಡಿಷನ್‌ ಮೂಲಕ ಆಯ್ಕೆ ಮಾಡಿದೆ. ಅದರ ಹೊರತಾಗಿ ರಂಗಭೂಮಿಯಲ್ಲಿ ಅನುಭವ ಹೊಂದಿರುವ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಕಮರ್ಷಿಯಲ್‌ ಸಿನಿಮಾವಲ್ಲ. ಹೊಸ ಬಗೆಯ ಕಥೆಯೊಂದಿಗೆ ಈ ಬಾರಿಯೂ ಸತ್ಯಪ್ರಕಾಶ್‌ ಸಿನಿಮಾ ಮಾಡುತ್ತಿದ್ದಾರೆ.

ಇಲ್ಲಿ ನಾಯಕ-ನಾಯಕಿ, ವಿಲನ್‌ ಯಾರೂ ಇರೋದಿಲ್ಲ. ಚಿತ್ರತಂಡ ಹೇಳುವಂತೆ ಕಥೆಯೇ ಈ ಚಿತ್ರದ ನಾಯಕ. ಚಿತ್ರಕ್ಕೆ ವಾಸುಕಿ ವೈಭವ್‌ ಸಂಗೀತ, ಲವಿತ್‌ ಛಾಯಾಗ್ರಹಣ, ವರದರಾಜ ಕಾಮತ್‌ ಕಲಾನಿರ್ದೇಶನ, ಕೆಂಪರಾಜು ಸಂಕಲನ ಚಿತ್ರಕ್ಕಿದೆ. ಚಿತ್ರೀಕರಣ ಮಲೆನಾಡಿನ ವಿವಿಧ ಕಡೆಗಳಲ್ಲಿ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next