Advertisement

Sathyamangalam; ತಮಿಳುನಾಡಿನ ದಿಂಬಂ ಘಾಟಿಯಲ್ಲಿ ಕಬ್ಬಿನ ಲಾರಿ ಉರುಳಿ ಮೂವರ ಸಾವು

01:29 PM Mar 12, 2024 | Team Udayavani |

ಚಾಮರಾಜನಗರ: ಕಬ್ಬು ತುಂಬಿದ ಲಾರಿ ವ್ಯಾನ್ ಮೇಲೆ ಬಿದ್ದ ಪರಿಣಾಮ ತಮಿಳುನಾಡಿನ ಮೂವರು ಮೃತಪಟ್ಟಿರುವ ಘಟನೆ ತಮಿಳುನಾಡಿನ ದಿಂಬಂ ಘಾಟಿಯಲ್ಲಿ ನಡೆದಿದೆ.

Advertisement

ತಮಿಳುನಾಡಿನ ಸತ್ಯಮಂಗಲಕ್ಕೆ ಹೋಗುತ್ತಿದ್ದ ಕಬ್ಬಿನ ಲಾರಿ, ದಿಂಬಂ ನ 27 ನೇ ಕೊಂಡೈ ಸೂಜಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಓಮ್ನಿ ವ್ಯಾನ್ ಮೇಲೆ ಉರುಳಿ ಬಿದ್ದಿದೆ.

ಇದರಿಂದ ಓಮ್ನಿಯಲ್ಲಿದ್ದ ಸೆಲ್ವಂ (50), ಚೆನ್ನಯ್ಯನ್ (55), ಕುಮಾರ್ (60) ಮೃತಪಟ್ಟಿದ್ದಾರೆ. ಮೂವರೂ ತಮಿಳುನಾಡಿನವರು.

ಸೌಂದರರಾಜ್, ಸೆಲ್ವಂ, ಮನೋಹರ್ ಗಾಯಗೊಂಡಿದ್ದು ಸತ್ಯಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next