Advertisement

ಸಾಸ್ತಾನ ಚರ್ಚ್‌: ಶುಭ ಶುಕ್ರವಾರ ಆಚರಣೆ

06:40 AM Mar 31, 2018 | Team Udayavani |

ಕೋಟ: ಕ್ರಿಶ್ಚಿಯನ್‌ ಸಮುದಾಯದ ಪವಿತ್ರ ಶುಭ ಶುಕ್ರವಾರವನ್ನು ಮಾ. 30ರಂದು ಸಾಸ್ತಾನದ ಸಂತ ಅಂತೋನಿ ಚರ್ಚ್‌ನಲ್ಲಿ ಉಪವಾಸ ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ನಡೆಯಿತು.

Advertisement

ಯುವ ವಿದ್ಯಾರ್ಥಿ ಸಂಚಲನದ ಸಂಘಟನೆಯ ಸದಸ್ಯರು ಯೇಸು ಕ್ರಿಸ್ತರು ಬಂಧನದಿಂದ- ಶಿಲುಬೆಯಲ್ಲಿ  ಅಂತ್ಯಗೊಳ್ಳುವ ತನಕದ ಪ್ರಕ್ರಿಯೆಯನ್ನು ನಟನೆಯ ಮೂಲಕ ತೆರೆದಿಟ್ಟರು.ಶಿಲುಬೆಯ ಹಾದಿಯಲ್ಲಿ ಯೇಸುವಿಗೆ ಮರಣದಂಡನೆ ಹೇರಿದ ಬಳಿಕ ಯೇಸುಕ್ರಿಸ್ತರು ಭಾರವಾದ ಶಿಲುಬೆಯನ್ನು ಹೊತ್ತು ಸಾಗುವುದು,  ಅವರ ಸಹಾಯಕ್ಕೆ  ಬರುವ ಸಿರೇನ್‌ ನಗರದ ಸಿಮಾಂವ್‌,  ಶಿಲುಬೆಗೇರಿಸಿ ಮೊಳೆಯನ್ನು ಜಡಿಯುವ ದೃಶ್ಯಗಳು ನೆರೆದಿದ್ದ ಭಕ್ತರ ಕಣ್ಣುಗಳನ್ನು  ಒದ್ದೆಯಾಗಿಸಿದವು.ಚರ್ಚ್‌ನ ಧರ್ಮಗುರುಗಳಾದ ಜೋನ್‌ ವಾಲ್ಟರ್‌ ಮೆಂಡೊನ್ಸಾ  ಅವರ ನೇತೃತ್ವದಲ್ಲಿ ಬ್ರದರ್‌ ಪ್ರದೀಪ್‌ ಕಾರ್ಡೊàಜಾ, ಅನಿತಾ ಅಲ್ಮೇಡಾ ಅವರ ನಿರ್ದೇಶನದೊಂದಿಗೆ ವೈ.ಸಿ.ಎಸ್‌., ವೇದಿ ಸೇವಕರು, ಕೆಥೋಲಿಕ್‌ ಸಭಾ ಹಾಗೂ ಇತರ ಸಂಘಟನೆಗಳ ಸದಸ್ಯರು ಸಹಕಾರ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next