Advertisement

ಮಹಿಳೆಯರಿಗೆ ಸೀರೆ, ಬೆಡ್‌ಶೀಟ್‌ ಹಂಚಿಕೆ

05:05 PM Dec 17, 2019 | Suhan S |

ರಾಮನಗರ: ಇರುಳಿಗರ ಕಾಲೋನಿಯ ಕುಟುಂಬಗಳಿಗೆ ಬೆಡ್‌ಶೀಟ್‌, ಮಹಿಳೆಯರಿಗೆ ಸೀರೆ ವಿತರಿಸಿ ಕಾಲೋನಿಯಲ್ಲೇ ಕೇಕ್‌ ಕತ್ತರಿಸಿ ವಿತರಿಸಿದ ಕುಮಾರಣ್ಣ ಅಭಿಮಾನಿಗಳ ಸಂಘದ ಸದಸ್ಯರು, ಮಾಜಿ ಸಿಎಂ ಕುಮಾರಸ್ವಾಮಿಯವರ 60ನೇ ವರ್ಷದ ಜನ್ಮದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು.

Advertisement

ಶ್ರೀರಾಮ ದೇವರ ಬೆಟ್ಟತಪ್ಪಲಿನಲ್ಲಿರುವ ಇರುಳಿಗರ ಕಾಲೋನಿಯಲ್ಲಿ ಸೋಮವಾರ ಸಂಭ್ರಮ ಮನೆ ಮಾಡಿತ್ತು. ಮಾಜಿ ಸಿಎಂ ಎಚ್‌ ಡಿಕೆಯವರ ಜನ್ಮದಿನವನ್ನು ಅಭಿಮಾನಿ ಬಳಗದ ಸದಸ್ಯರು ಕಾಲೋನಿ ಸದಸ್ಯರೊಂದಿಗೆ ಬೆರೆತು ಕೇಕ್‌ ಕತ್ತರಿಸಿ ಆಚರಿಸಿದ್ದು, ಕಾಲೋನಿಯನಿವಾಸಿಗಳಲ್ಲಿ ಹೊಸ ಹುರುಪು ಮೂಡಿಸಿತು. ಜೆಡಿಎಸ್‌ ಕಾನೂನು ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ್‌ ಮಾತನಾಡಿ, ರಾಮನಗರ ಶಾಸಕರಾಗಿ, ಈಗ ಚನ್ನಪಟ್ಟಣದ ಶಾಸಕರಾಗಿ ಕುಮಾರಸ್ವಾಮಿ ಜನ ಮೆಚ್ಚುವ ಅಭವೃದ್ಧಿ ಕೈಗೊಂಡಿದ್ದಾರೆ. ರೈತರ ಬಂಧು ಕುಮಾರಸ್ವಾಮಿ, ರೈತರ ಎಲ್ಲಾ ಸಾಲ ಮನ್ನಾ ಮಾಡಿ ಮಾದರಿಯಾಗಿದ್ದಾರೆ.

ರಾಜ್ಯದ ಎಲ್ಲಾ ವರ್ಗದ ಜನರ ಕಲ್ಯಾಣಕ್ಕೆ ಕೊಡುಗೆ ನೀಡಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ತೆಗೆದುಕೊಂಡ ಮಹತ್ವದ ನಿರ್ಧಾರಗಳು, ಜಾರಿಗೊಳಿಸಿದ ಯೋಜನೆಗಳು, ಕಾರ್ಯಕ್ರಮಗಳು ಇತ್ಯಾದಿ ಬಗ್ಗೆ ಮಾಹಿತಿನೀಡಿದರು. ರಾಮನಗರದ ಅಭಿವೃದ್ಧಿಗೆಕುಮಾರಸ್ವಾಮಿ ಹಾಕಿಕೊಟ್ಟ ಬುನಾದಿ ಕಾರಣ. ಕುಮಾರಣ್ಣಗೆ ಚಾಮುಂಡೇಶ್ವರಿ ತಾಯಿ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಶುಭ ಹಾರೈಸಿದರು.

ಜೆಡಿಎಸ್‌ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎಸ್‌.ಜಯಕುಮಾರ್‌,  , ಕುಮಾರಣ್ಣ ಅಭಿಮಾನಿ ಬಳಗದ ಸಿ.ಎಸ್‌.ರಾಜು, ಜೆಡಿಎಸ್‌ ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷ ಗಂಗಾಧರ್‌ ಜಿ.ಕೆ., ಜೆಡಿಎಸ್‌ ಜಿಲ್ಲಾಸೇವಾದಳಅಧ್ಯಕ್ಷ ಯೋಗೇಶ್‌ಕುಮಾರ್‌, ಶರತ್‌ ಬಾಬು, ರಂಗನಾಥ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next