Advertisement

Dharawad: ಹೈಕಮಾಂಡ್ ಒಪ್ಪಿದರೆ ದಿಂಗಾಲೇಶ್ವರ ಶ್ರಿಗಳಿಗೆ ಬೆಂಬಲ: ಸಚಿವ ಲಾಡ್

03:39 PM Apr 10, 2024 | Team Udayavani |

ಧಾರವಾಡ : ರಾಜಕೀಯವಾಗಿ ಧಾರವಾಡ ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಹಿಂದಕ್ಕೆ ಪಡೆಯುವ ಕುರಿತು ಹೈಕಮಾಂಡ್ ನಿರ್ಧಾರ ತೆಗೆದುಕೊಂಡರೆ ದಿಂಗಾಲೇಶ್ವರ ಸ್ವಾಮೀಜಿಗೆ ಖಂಡಿತವಾಗಿಯೂ ಬೆಂಬಲಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

Advertisement

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ವಿನೋದ್ ಅಸೂಟಿ ಅವರಿಗೆ ಬಿ ಫಾರ್ಮ್ ನೀಡಿದ್ದು, ಶೇ.೭೦ ರಷ್ಟು ಚುನಾವಣಾ ಪ್ರಚಾರ ಕೆಲಸವನ್ನು ಮಾಡಿ ಮುಗಿಸಿದ್ದೇವೆ. ಇದೀಗ ದಿಂಗಾಲೇಶ್ವರ ಸ್ವಾಮೀಜಿ ಅವರನ್ನು ಅಭ್ಯರ್ಥಿಯನ್ನಾಗಿ ಕಣದಲ್ಲಿ ಇಳಿಸಿ ಕಾಂಗ್ರೆಸ್ ಹೈ ಕಮಾಂಡ್ ಬೆಂಬಲ ಸೂಚಿಸಲು ನಿರ್ಧಾರ ತೆಗೆದುಕೊಂಡರೆ ಆಗ ಖಂಡಿತವಾಗಿಯೂ ಅವರ ಪರವಾಗಿ ಕೆಲಸ ಮಾಡಲೇಬೇಕಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಚಾರದಲ್ಲಿ ಮಾಧ್ಯಮಗಳು ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿ ಉತ್ತರ ಪಡೆದುಕೊಳ್ಳುವುದು ಸೂಕ್ತ. ಆದರೆ ದಿಂಗಾಲೇಶ್ವರ ಸ್ವಾಮೀಜಿ ಅವರು ಕೂಡ ಸಾಕಷ್ಟು ಜನರಿಗೆ ಗೊತ್ತಿದ್ದವರು, ಉತ್ತಮ ವಾಗ್ಮಿಗಳು, ಅವರ ಪ್ರವಚನಕ್ಕೆ ಸಾವಿರಾರು ಜನ ಸೇರುತ್ತಾರೆ. ನಾನು ಕೂಡ ಅವರ ಪ್ರವಚನ ಕೇಳಿದ್ದೇನೆ. ಸದ್ಯಕ್ಕೆ ವೈಯಕ್ತಿಕವಾಗಿ ನನಗಂತೂ ಅವರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಅಂತಹ ಪ್ರಸಂಗ ಬಂದಾಗ ಬೆಂಬಲಿಸುವುದು ಅನಿವಾರ್ಯವಾಗುತ್ತದೆ ಎಂದು ಸಚಿವ ಲಾಡ್ ಹೇಳಿದ್ದಾರೆ.

ಇದನ್ನೂ ಓದಿ: Lok Sabha Election: ಏಪ್ರಿಲ್ 14ರಂದು ಪ್ರಧಾನಿ ಮಂಗಳೂರಿಗೆ… ಸಮಾವೇಶದ ಬದಲು ರೋಡ್ ಶೋ…

Advertisement

Udayavani is now on Telegram. Click here to join our channel and stay updated with the latest news.

Next