Advertisement

Bellary; ಯಾರೇ ಬಂದರೂ ಸಂಡೂರಿನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ: ಸಚಿವ ಸಂತೋಷ ಲಾಡ್

03:03 PM Oct 24, 2024 | Team Udayavani |

ಬಳ್ಳಾರಿ: ಸಂಡೂರು ಕಾಂಗ್ರೆಸ್ ಭದ್ರಕೋಟೆ. ಯಾರೇ ಬಂದರೂ ಕಾಂಗ್ರೆಸ್ ಗೆಲ್ಲುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದೇವೆ. ರಾಜಕೀಯ ಮಾಡಲು ಎಲ್ಲರೂ ಬರುತ್ತಾರೆ ಎಂದು ಸಚಿವ ಸಂತೋಷ ಲಾಡ್ ಅವರು ಪರೋಕ್ಷವಾಗಿ ಜನಾರ್ದನ ರೆಡ್ಡಿಗೆ ಟಾಂಗ್ ನೀಡಿದರು.

Advertisement

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅವರು ಸಂಡೂರಿನಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಗ್ಯಾರಂಟಿ ಯೋಜನೆ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರ ಕೆಲಸ ನಮಗೆ ಗೆಲ್ಲುವಂತೆ ಮಾಡುತ್ತದೆ. ತುಕಾರಾಂ ಮಾಡಿರುವ ಒಳ್ಳೆಯ ಕೆಲಸವೇ ಗೆಲುವಿಗೆ ಕಾರಣವಾಗಲಿದೆ. ಜನಾರ್ದನ ರೆಡ್ಡಿಗೆ ಮನೆಯಿಲ್ಲ ಮನೆ ಮಾಡ್ತಾರೆ. ನಮಗೆ ಮೊದಲಿಂದಲೂ ಮನೆ ಇದೆ ಎಂದು ಜನಾರ್ದನ ರೆಡ್ಡಿ ಸಂಡೂರಿನಲ್ಲಿ ಮನೆ ಮಾಡಿರುವುದಕ್ಕೆ ಟಾಂಗ್ ನೀಡಿದರು.

ಸಂತೋಷ್ ಲಾಡ್ ವರ್ಸಸ್ ಜನಾರ್ದನ ರೆಡ್ಡಿ ಎನ್ನುವದೇನು ಇಲ್ಲ. ಕಾಂಗ್ರೆಸ್ ಭಿನ್ನಾಭಿಪ್ರಾಯ ಇಲ್ಲ‌, ಸಮಾಧಾನ ಮಾಡಿದ್ದೇವೆ. ಮತದಾನ ಪ್ರಮಾಣದ ಜೊತೆಗೆ ಕಾಂಗ್ರೆಸ್ ಗೆ ಮತವೂ ಹೆಚ್ಚಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next