ಮಣಿಪಾಲ: ಬಾಲಿವುಡ್ ನಟ ಸಂಜಯ್ ದತ್ ಅನಾರೋಗ್ಯಕ್ಕೊಳಗಾಗಿ ವಿದೇಶದಲ್ಲಿ ಚಿಕಿತ್ಸೆಗೊಳಗಾಗಲಿರುವುದು KGF-2 ಸೇರಿದಂತೆ ಅವರು ನಟಿಸುತ್ತಿರುವ ಚಿತ್ರಗಳ ನಿರ್ಮಾಪಕರಿಗೆ ಸಂಕಷ್ಟಕ್ಕೆ ಕಾರಣವಾಗಬಹುದೇ ? ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ರಂಜಿತ್ ಯಾದವ್: ಸಂಜಯ್ ದತ್ ಒಬ್ಬರು ಉತ್ತಮ ನಟ. ಆವರು ಆದಷ್ಟು ಬೇಗ ಗುಣಮುಖರಾಗಿ ಮರಳಿ ಬರಲಿ ಎಂಬ ಹಾರೈಕೆ ನಮ್ಮದು.
ಸುಧೀರ್ ಮಹೇಶ್: ಖಂಡಿತ ಆಗಬಹುದು. ಆದರೆ ಅದಷ್ಷು ಬೇಗ ಗುಣಮುಖರಾಗಿ ಬರಲಿ. ಕೆಜಿಎಫ್ ಸೇರಿದಂತೆ ಅವರ ಚಿತ್ರಗಳು ದೊಡ್ಡ ಹಿಟ್ ಆಗಲಿ.
ಜಯಶಂಕರ್ ರಾವ್: ಇಲ್ಲ. ಕೆಜಿಎಫ್ ಚಿತ್ರದಲ್ಲಿ ಯಶ್ ಸೇರಿದಂತೆ ಕನ್ನಡದ ನಟರ ದಂಡೇ ಇದೆ. ಹಾಗಾಗಿ ಚಿತ್ರಕ್ಕೆ ನಷ್ಟವಾಗುವುದು ಕಷ್ಟ. ಆದರೆ ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂಬ ಹಾರೈಕೆ ನಮ್ಮದು.