Advertisement

17ನೇ ವಾರ್ಡ್‌ನಲ್ಲಿ ಸ್ಯಾನಿಟೈಸ್

07:39 PM May 31, 2021 | Team Udayavani |

ಹಾಸನ: ಜಿಲ್ಲಾ ಕಾಂಗ್ರೆಸ್‌ ಮುಖಂಡ ಹಾಗೂ ಕೆಪಿಸಿಸಿ ಸದಸ್ಯಎಚ್‌.ಕೆ.ಮಹೇಶ್‌ ನೇತೃತ್ವದಲ್ಲಿ ಹಾಸನ ನಗರದ 17ನೇವಾರ್ಡ್‌ನಲ್ಲಿ ಸ್ಯಾನಿಟೈಸ್‌ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಹೇಶ್‌ ಅವರು, ಜಿಲ್ಲೆಯಲ್ಲಿಕೊರೊನಾ ಸೋಂಕಿನ ಹಾವಳಿ ಕಡಿಮೆಯಾಗಿಲ್ಲ. ಪ್ರತಿದಿನಹತ್ತಾರು ಜನರು ಬಲಿಯಾಗುತ್ತಿದ್ದಾರೆ.

Advertisement

ರೋಗ ನಿಯಂತ್ರಣಕ್ರಮಗಳನ್ನು ಕೈಗೊಳ್ಳಲು ಸ್ಥಳೀಯ ನಗರಸಭೆ ಆಡಳಿತವಿಫ‌ಲವಾಗಿದೆ. ಹಾಗಾಗಿ ನಾವು ಸ್ಯಾನಿಟೈಸ್‌ ಮಾಡಿಸುತ್ತಿದ್ದೇವೆ ಎಂದರು. ಕಾಂಗ್ರೆಸ್‌ ಪಕ್ಷದ ವತಿಯಿಂದ ಹಲವುಸೇವಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.

ಮಾಸ್ಕ್ ವಿತರಣೆ,ಫ‌ುಡ್‌ಕಿಟ್‌ಗಳ ವಿತರಣೆ, ಆ್ಯಂಬುಲೆನ್ಸ್‌ ಕೊಡುಗೆ ನೀಡಿದ್ದು,ಈಗ ಸ್ಯಾನಿಟೈಸ್‌ ಆರಂಭಿಸಿದ್ದೇವೆ ಎಂದು ಹೇಳಿದರು. ಪಕ್ಷದಮುಖಂಡರಾದ ಅಶ್ರು ಆಸಿಫ್, ಆರೀಫ್, ಅಸ್ಲಾಂಪಾಷಾ,ಚಂದ್ರು ಮತ್ತಿತರರು ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next