Advertisement

ಕೊಲ್ಲೂರಿನ ಕ್ವಾರಂಟೈನ್‌ ಕೇಂದ್ರ ಸಹಿತ ಪೇಟೆಯ ನೈರ್ಮಲೀಕರಣ

10:16 PM May 22, 2020 | Team Udayavani |

ಕೊಲ್ಲೂರು: ಇಲ್ಲಿನ ಡಾರ್ಮೆಟರಿ ಹಾಗೂ ಹಾಸ್ಟೆಲ್‌ ಗಳಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು ಕೆಲವು ಕೋವಿಡ್-19 ಪಾಸಿಟಿವ್‌ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಮೇ 21 ರಂದು ಮಧ್ಯಾಹ್ನದಿಂದ ಸಂಜೆಯ ತನಕ ಅಗ್ನಿ ಶಾಮಕ ದಳದಿಂದ ಸಾನಿಟೈಸೇಶನ್‌ ನಡೆಯಿತು.

Advertisement

ಬೈಂದೂರು ತಹಶೀಲ್ದಾರ್‌ ಬಿ.ಪಿ. ಪೂಜಾರ್‌, ಕೊಲ್ಲೂರು ಗ್ರಾಪಂ ಅಧ್ಯಕ್ಷ ಪ್ರಕಾಶ್‌ ಪೂಜಾರಿ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ರಾಜೇಶ್‌ ಹಾಗೂ ಅಗ್ನಿ ಶಾಮಕ ದಳದ ಅಧಿಕಾರಿಗಳು ಹಾಗು ಸಿಬಂದಿ ನೇತೃತ್ವದಲ್ಲಿ ದೇಗುಲ ಪರಿಸರ, ರಥ ಬೀದಿ, ಪೇಟೆ ಅಲ್ಲದೆ ವಿವಿಧೆಡೆ ಸಂಪೂರ್ಣ ಸಾನಿಟೈಸೇಶನ್‌ ನಡೆಯಿತು.

ಪ್ರಮುಖವಾಗಿ ಕ್ವಾರಂಟೈನ್‌ ಕೇಂದ್ರಗಳಲ್ಲಿ ಪ್ರತ್ಯೇಕ ಮೂರು ವಸತಿಗೃಹಗಳಲ್ಲದೆ ಆಸುಪಾಸಿನ ಪ್ರದೇಶಗಳ ನೈರ್ಮಲೀಕರಣ ಕಾರ್ಯ ನಡೆಯಿತು. ಗ್ರಾಮ ಲೆಕ್ಕಿಗ ವೀರೇಶ್‌ ಹಾಗೂ ಕೊಲ್ಲೂರು ಠಾಣಾಧಿಕಾರಿ ಮಹಾವೀರ ಭೋಸ್ಲೆ ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next